Don't Miss!
- News ಕಾಂಗ್ರೆಸ್ ಜನರಿಗೆ ಹೋಲ್ಸೆಲ್ ಮೋಸ ಮಾಡುತ್ತಿದೆ: ಮಾಜಿ ಸಿಎಂ
- Sports ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ನಲ್ಲಿ ವಿರಾಟ್ ಕೊಹ್ಲಿಯ 50ನೇ ಏಕದಿನ ಶತಕ!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯೂಟ್ಯೂಬರ್ ವಿರುದ್ಧ ಭಾರಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ ಅಕ್ಷಯ್ ಕುಮಾರ್
ಸುಳ್ಳು ಸುದ್ದಿಗಳು ನಿಜವಾದ ಸುದ್ದಿಗಳಿಗಿಂತಲೂ 1000 ಪಟ್ಟು ವೇಗದಲ್ಲಿ ಹರಿದಾಡುವ ಕಾಲವಿದು. ಸಾಮಾಜಿಕ ಜಾಲತಾಗಳು ಸುಳ್ಳು ಸುದ್ದಿಯ ಕಾರ್ಖಾನೆಗಳಾಗಿವೆ. ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಪ್ರತಿನಿತ್ಯ ಸುಳ್ಳುಸುದ್ದಿಗಳಿಂದಾಗಿ ತೊಂದರಗೆ ಈಡಾಗುತ್ತಿದ್ದಾರೆ.
ಫೇಸ್ ಬುಕ್ ಖಾತೆ, ಟ್ವಿಟ್ಟರ್ ಹ್ಯಾಂಡಲ್, ಯೂಟ್ಯೂಬ್ ಚಾನೆಲ್ ಹೊಂದಿ ಹಣ ಗಳಿಸಲು ಜನರಿಗೆ ರೋಚಕ ಎನಿಸುವ ಆದರೆ ಸತ್ಯವಲ್ಲದ ಸುಳ್ಳು ಸುದ್ದಿಗಳನ್ನು ನೀಡಲಾಗುತ್ತಿದೆ. ಸುಳ್ಳು ಸುದ್ದಿಗಳನ್ನು ನೀಡುವ ಸಾವಿರಾರು ಚಾನೆಲ್ಗಳು ಯೂಟ್ಯೂಬ್ನಲ್ಲಿವೆ.
ಇತ್ತೀಚೆಗೆ ನಟ ಅಕ್ಷಯ್ ಕುಮಾರ್ ವಿರುದ್ಧ ಯೂಟ್ಯೂಬ್ ಚಾನೆಲ್ ಒಂದು ಸುಳ್ಳು ಸುದ್ದಿ ಪ್ರಕಟಿಸಿತು. ಆರೋಪಿಯೊಬ್ಬರಿಗೆ ಅಕ್ಷಯ್ ಕುಮಾರ್ ಸಹಾಯ ಮಾಡಿದ್ದಾನೆ, ಅವರನ್ನು ವಿದೇಶಕ್ಕೆ ಕಳಿಸಲು ನೆರವಾಗಿದ್ದಾನೆ ಎಂದು ಯೂಟ್ಯೂಬ್ ಚಾನೆಲ್ ಸುಳ್ಳು ಸುದ್ದಿ ಪ್ರಕಟಿಸಿತ್ತು. ಈಗ ಆ ಯೂಟ್ಯೂಬರ್ ವಿರುದ್ಧ ಭಾರಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
ರಿಯಾ ಚಕ್ರವರ್ತಿ ಕೆನಡಾಕ್ಕೆ ಪರಾರಿಯಾಗಲು ಸಹಾಯ!?
ಬಿಹಾರದ ಯೂಟ್ಯೂಬರ್ ರಶೀದ್ ಸಿದ್ಧಿಖಿ ಎಂಬಾತ ತನ್ನ 'ಎಫ್ಎಫ್ ನ್ಯೂಸ್' ಹೆಸರಿನ ಯೂಟ್ಯೂಬ್ ಚಾನೆಲ್ನಿಂದ ಸುಶಾಂತ್ ಸಿಂಗ್ ಸಾವಿನ ಸುದ್ದಿಗಳನ್ನು ಬಿತ್ತರಿಸುತ್ತಿದ್ದ. ಈ ವೇಳೆ ಆರೋಪಿ ರಿಯಾ ಚಕ್ರವರ್ತಿ ಕೆನೆಡಾಗೆ ತಪ್ಪಿಸಿಕೊಳ್ಳಲು ಅಕ್ಷಯ್ ಕುಮಾರ್ ಸಹಾಯ ಮಾಡಿದ್ದಾನೆ ಎಂಬ ಸುಳ್ಳು ಸುದ್ದಿಯನ್ನು ರಶೀದ್ ಸಿದ್ಧಿಖಿ ಪ್ರಕಟಿಸಿದ್ದ.
ಭಾರಿ ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲು
ಇದು ಅಕ್ಷಯ್ ಕುಮಾರ್ ಗಮನಕ್ಕೆ ಬಂದಿದ್ದು, ಸುಳ್ಳು ಸುದ್ದಿ ಪ್ರಕಟಿಸಿದ ಯೂಟ್ಯೂಬರ್ ವಿರುದ್ಧ ಭಾರಿ ಮೊತ್ತದ ಮಾನನಷ್ಟ ಮೊಕದ್ದಮೆಯನ್ನು ಅಕ್ಷಯ್ ಕುಮಾರ್ ಹೂಡಿದ್ದಾರೆ. ಕೆಲವು ಮಾಧ್ಯಮಗಳು ಅಕ್ಷಯ್ ಕುಮಾರ್ 500 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದಿವೆ, ಆದರೆ ಈ ಬಗ್ಗೆ ಸ್ಪಷ್ಟನೆ ಇಲ್ಲ.
ಸಾಕಷ್ಟು ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ್ದ ರಶೀದ್
ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ಎಫ್ಎಫ್ ನ್ಯೂಸ್ ಯೂಟ್ಯೂಬ್ ಚಾನೆಲ್ನ ರಶೀದ್ ಸಿದ್ಧಿಖಿ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಡಿದ್ದ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹಾಗೂ ಅವರ ಪುತ್ರ ಆದಿತ್ಯ ಠಾಕ್ರೆ ಹೆಸರನ್ನೂ ಎಳೆದು ತಂದಿದ್ದ.
ರಶೀದ್ ಸಿದ್ಧಿಖಿಯನ್ನು ಬಂಧಿಸಲಾಗಿತ್ತು
ಸಿವಿಲ್ ಎಂಜಿನಿಯರ್ ಪದವಿ ಮುಗಿಸಿರುವ ರಶೀದ್ ಸಿದ್ಧಿಖಿ ವಿರುದ್ಧ ಈ ಮೊದಲು ಸಹ ಇಬ್ಬರು ವಕೀಲರು ದೂರು ನೀಡಿದ್ದರು. ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕಾಗಿ ಈ ಯೂಟ್ಯೂಬರ್ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಈಗ ಅಕ್ಷಯ್ ಕುಮಾರ್ ಸಹ ರಶೀದ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Recommended Video
ಲಕ್ಷಾಂತರ ಹಣ ಗಳಿಸುತ್ತಿರುವ ರಶೀದ್ ಸಿದ್ಧಿಖಿ
ಸುಳ್ಳು ಸುದ್ದಿ ಪ್ರಕಟಿಸುವುದರಿಂದಲೇ ರಶೀದ್ ಸಿದ್ಧಿಖಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಿದ್ದಾನೆ. ಜುಲೈ ತಿಂಗಳಲ್ಲಿ ಯೂಟ್ಯೂಬ್ನಿಂದ 2.75 ಲಕ್ಷ, ಆಗಸ್ಟ್ ತಿಂಗಳಲ್ಲಿ 5.57 ಲಕ್ಷ, ಸೆಪ್ಟೆಂಬರ್ ತಿಂಗಳಲ್ಲಿ 6.50 ತಿಂಗಳು ಹಣ ಗಳಿಸಿದ್ದಾನೆ ರಶೀದ್ ಸಿದ್ಧಿಖಿ.