Don't Miss!
- Finance ಆಧಾರ್ ಉಚಿತ ಅಪ್ಡೇಟ್ ದಿನಾಂಕ ಜೂ.14ರವರೆಗೆ ವಿಸ್ತರಣೆ: ಆನ್ಲೈನ್ನಲ್ಲಿ ಹೀಗೆ ನವೀಕರಿಸಿ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- News 7th Pay Commission : ಸರ್ಕಾರಕ್ಕೆ ಸಲ್ಲಿಸಲಾಗಿರುವ ಏಳನೇ ವೇತನ ಆಯೋಗದ ವರದಿಯಲ್ಲಿರುವ ಪ್ರಮುಖ ಅಂಶಗಳ ಪಟ್ಟಿ ಇಲ್ಲಿದೆ
- Sports IPL 2024: ಮುಂಬೈ ನಾಯಕನಿಗೆ ಪತ್ರಕರ್ತರಿಂದ ಬೌನ್ಸರ್: ಉತ್ತರಿಸದೆ ಮೌನಕ್ಕೆ ಶರಣಾದ ಹಾರ್ದಿಕ್ ಪಾಂಡ್ಯ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಜಿಯಾಬಾದ್ ಗಲಾಟೆ: ನಟಿ ಸ್ವರಾ ಭಾಸ್ಕರ್ ವಿರುದ್ಧ ದೂರು
ಗಾಜಿಯಾಬಾದ್ನಲ್ಲಿ ಮುಸ್ಲಿಂ ವೃದ್ಧನೋರ್ವನ ಮೇಲೆ ಹಲ್ಲೆ ಆಗಿದೆ ಎಂಬ ಸುದ್ದಿಯನ್ನು ಟ್ವೀಟರ್ನಲ್ಲಿ ಹಂಚಿಕೊಂಡಿದ್ದ ನಟಿ ಸ್ವರಾ ಭಾಸ್ಕರ್ ವಿರುದ್ಧ ದೂರು ದಾಖಲಾಗಿದೆ.
ನಟಿ ಸ್ವರಾ ಭಾಸ್ಕರ್ ಮಾತ್ರವೇ ಅಲ್ಲದೆ ಅರ್ಫಾ ಕಾನುಮ್ ಶೇರ್ವಾನಿ, ಆಸಿಫ್ ಖಾನ್, ಟ್ವಿಟ್ಟರ್, ಹಾಗೂ ಟ್ವಿಟ್ಟರ್ ಭಾರತದ ಸಿಇಒ ಮನೀಷ್ ಮಹೇಶ್ವರಿ ವಿರುದ್ಧ ದೆಹಲಿಯ ತಿಲಕ್ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವೃದ್ಧನೊಬ್ಬ, ''ನನ್ನ ಮೇಲೆ ಗುಂಪೊಂದು ಹಲ್ಲೆ ಮಾಡಿ, ನನ್ನ ಗಡ್ಡ ಬೋಳಿಸಿ, ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಬಲವಂತ ಮಾಡಿದರು'' ಎಂದು ಆರೋಪಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಅದನ್ನು ಖಂಡಿಸಿ ಸ್ವರಾ ಭಾಸ್ಕರ್ ಹಾಗೂ ಇತರರು ಅಭಿಪ್ರಾಯ ಹಂಚಿಕೊಂಡಿದ್ದರು.
''ವಿಡಿಯೋ ಹಂಚಿಕೊಂಡಿರುವ ವ್ಯಕ್ತಿಗಳು ಸತ್ಯವನ್ನು ಪರಿಶೀಲಿಸಿದರೆ ಘಟನೆಗೆ ಕೋಮು ಬಣ್ಣ ಬಳಿದು ಟ್ವಿಟ್ಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಸಾರ್ವಜನಿಕ ಶಾಂತಿಯನ್ನು ಕದಡಲು ಯತ್ನಿಸಿದ್ದಾರೆ'' ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
''ನನ್ನ ಮೇಲೆ ಹಲ್ಲೆ ಮಾಡಿ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದರು'' ಎಂದು ವೃದ್ಧ ಅಬ್ದುಲ್ ಶಾಮೀದ್ ಶಾಫಿ ಹೇಳಿದ್ದ ವೀಡಿಯೊ ಜೂನ್ 14 ರಂದು ವೈರಲ್ ಆಗಿತ್ತು. ಆದರೆ ಈ ಘಟನೆ ವೈಯಕ್ತಿಕ ಅಸಮಾಧಾನಗಳಿಂದ ಆಗಿದೆಯೇ ಹೊರತು ಕೋಮು ಕಾರಣಕ್ಕೆ ಅಲ್ಲವೆಂದು ಗಾಜಿಯಾಬಾದ್ ಎಸ್ಪಿ ಹೇಳಿಕೆ ನೀಡಿದ್ದರು.
Recommended Video
''ಅಬ್ದುಲ್ ಶಾಮೀದ್ ಶಾಫಿ ಮಾರಿದ್ದ ತಾಯತ ಸರಿಯಾಗಿಲ್ಲವೆಂಬ ಅಸಮಾಧಾನದಿಂದ ಕಲ್ಲೂ ಗುರ್ಜಾರ್, ಪರ್ವೇಷ್ ಗುರ್ಜಾರ್ ಮತ್ತು ಆದಿಲ್ ವೃದ್ಧನ ಮೇಲೆ ಹಲ್ಲೆ ಮಾಡಿದ್ದರು. ಪ್ರಸ್ತುತ ಮೂವರನ್ನೂ ಬಂಧಿಸಲಾಗಿದೆ'' ಎಂದು ಎಸ್ಪಿ ಹೇಳಿದ್ದಾರೆ.