Don't Miss!
- News Karnataka Lok Sabha Election 2024: ಏ.26ಕ್ಕೆ ಕರ್ನಾಟಕ ಮೊದಲ ಹಂತದ ಮತದಾನ: 14 ಕ್ಷೇತ್ರ, ಅಭ್ಯರ್ಥಿ, ಪೈಪೋಟಿ ಬಗ್ಗೆ ಮಾಹಿತಿ
- Lifestyle ಐಸ್ ಟೀ ಮಾಡುವುದು ಹೇಗೆ? ಇಲ್ಲಿದೆ ಪರ್ಫೆಕ್ಟ್ ಐಸ್ ಟೀ ರೆಸಿಪಿ
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಜಿಯಾ ಖಾನ್ ಸಾವು, ಏನಾದರು ಸುಳಿವು ಸಿಕ್ತಾ?
ಸದ್ಯಕ್ಕೆ ಮುಂಬೈ ಪೊಲೀಸರನ್ನು ನಖಶಿಖಾಂತ ಕಾಡುತ್ತಿರುವ ಪ್ರಶ್ನೆ ಇದು. ಬಾಲಿವುಡ್ ನ ಮಾದಕ ಬೆಡಗಿ ನಫೀಸಾ ಅಲಿಯಾಸ್ ಜಿಯಾ ಖಾನ್ ಸೋಮವಾರ (ಜೂ.3) ಮಧ್ಯರಾತ್ರಿ ತಮ್ಮ ನಿವಾಸದಲ್ಲಿ ಸಾವಪ್ಪಿದರು. ನೇಣು ಬಿಗಿದುಕೊಂಡು ಸ್ಥಿತಿಯಲ್ಲಿದ್ದ ಅವರ ದೇಹವನ್ನು ನೋಡಿದರೆ ಇದು ಆತ್ಮಹತ್ಯೆ ಎಂದು ಮೊದಲ ನೋಟಕ್ಕೆ ತಿಳಿಯುತ್ತದೆ.
ಆದರೆ ಪೊಲೀಸರು ಇದಕ್ಕೂ ಹೊರತಾಗಿ ಏನಾದರೂ ನಡೆದಿದೆಯೇ. ಇದರಲ್ಲಿ ಯಾರ ಹಸ್ತ ಇದೆ ಎಂಬ ಹುಡುಕಾಟದಲ್ಲಿ ಬಿದ್ದಿದ್ದಾರೆ. ಆಕೆಯ ಸಾವಿಗೆ ಕಾರಣ ಏನು ಎಂಬುದೂ ಇನ್ನೂ ಗೊತ್ತಾಗಿಲ್ಲ. ಆಕೆಯ ಮೊಬೈಲ್ ಫೋನಿಗೆ ಕಟ್ಟಕಡೆಯದಾಗಿ ಬಾಯ್ ಫ್ರೆಂಡ್ ಕಡೆಯಿಂದ ಕರೆ ಬಂದಿತ್ತು.
ಇವರಿಬ್ಬರೂ ಫೋನಿನಲ್ಲಿ ಸುದೀರ್ಘವಾಗಿ ಮಾತನಾಡಿದ್ದಾರೆ. ಅದಾದ ಬಳಿಕ ಜಿಯಾ ಸಾವಿಗೆ ಶರಣಾಗಿದ್ದಾರೆ. ಜಿಯಾ ಬಾಯ್ ಫ್ರೆಂಡ್ ಸೂರಜ್ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ಈತ ಬಾಲಿವುಡ್ ನ ಪೋಷಕ ನಟ ಆದಿತ್ಯ ಪಾಂಚೋಲಿ ಅವರ ಪುತ್ರ.
ಬಾಯ್ ಫ್ರೆಂಡ್ ಜೊತೆ ಸುದೀರ್ಘ ಸಂಭಾಷಣೆ
ಸೋಮವಾರ ರಾತ್ರಿ 10.53ಕ್ಕೆ ಆರಂಭವಾದ ಇವರ ಮೊಬೈಲ್ ಸಂಭಾಷಣೆ ಮುಗಿಯುವಷ್ಟರಲ್ಲಿ ರಾತ್ರಿ 11.22 ಆಗಿತ್ತು. ಇದಾದ ಬಳಿಕ ಆಕೆ ನೇಣಿಗೆ ಶರಣಾಗಿದ್ದಾಳೆ. ಇಷ್ಟಕ್ಕೂ ಇವರಿಬ್ಬರ ನಡುವೆ ಏನು ಸಂಭಾಷಣೆ ನಡೆಯಿತು ಎಂಬ ಬಗ್ಗೆ ಪೊಲೀಸರು ಕಿವಿನೆಟ್ಟಿದ್ದಾರೆ.
ಇನ್ನೂ ನಿಗೂಢವಾಗಿಯೇ ಉಳಿದ ಕಾರಣ
ಮುಂಬೈನ ಜುಹು ಪ್ರದೇಶದಲ್ಲಿರುವ ಜಿಯಾ ಅವರ ನಿವಾಸ ಸಂಗೀತ್ ಸಾಗರ್ ಭವನದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿ ಪೊಲೀಸರಿದ್ದಾರೆ. ಇಷ್ಟಕ್ಕೂ ಜಿಯಾ ಸಾವಿಗೆ ಬಲವಾದ ಕಾರಣ ಏನಿರಬಹುದು ಎಂಬುದು ಇನ್ನೂ ನಿಗೂಢವಾಗಿದೆ.
ಅವಕಾಶಗಳಿಲ್ಲದೆ ಮಾನಸಿಕವಾಗಿ ನೊಂದಿದ್ದರು
"ಕೈಯಲ್ಲಿ ಅವಕಾಶಗಳಿಲ್ಲದೆ ಜಿಯಾ ತುಂಬಾ ನೊಂದಿದ್ದಳು. ಇದೇ ಕೊರಗಿನಲ್ಲಿ ಖಿನ್ನತೆಗೂ ಒಳಗಾಗಿದ್ದಳು. ಬಹುಶಃ ಆಕೆಯ ಸಾವಿಗೆ ಇದೂ ಕಾರಣವಾಗಿರಬಹುದು" ಎಂದು ಅವರ ತಾಯಿ ರಬಿಯಾ ಅಮಿನ್ ಪೊಲೀಸರಿಗೆ ತಿಳಿಸಿದ್ದಾರೆ.
ತೆಲುಗು, ತಮಿಳು ಚಿತ್ರಗಳಿಂದಲೂ ತಿರಸ್ಕಾರ
ಕೆಲವು ತೆಲುಗು, ತಮಿಳು ಚಿತ್ರಗಳ ಸ್ಕ್ರೀನ್ ಟೆಸ್ಟ್ ಗೂ ಹಾಜರಾಗಿದ್ದರು. ಆದರೆ ಯಾವುದೇ ಚಿತ್ರಕ್ಕೂ ಆಯ್ಕೆಯಾಗಿರಲಿಲ್ಲ. ಇದು ಆಕೆಯನ್ನು ಇನ್ನಷ್ಟು ಮಾನಸಿಕವಾಗಿ ಕಂಗೆಡಿಸಿತ್ತು ಎಂದು ರಬಿಯಾ ಪೊಲೀಸರಿಗೆ ವಿವರ ನೀಡಿದ್ದಾರೆ.
ಹೊಸ ವೃತ್ತಿಜೀವನದ ನಿರೀಕ್ಷೆಯಲ್ಲಿದ್ದರು
ಬಾಲಿವುಡ್ ಚಿತ್ರರಂಗದಲ್ಲಿ ತಾನೊಬ್ಬ ದೊಡ್ಡ ತಾರೆಯಾಗಿ ಬೆಳಗಬೇಕು ಎಂದು ಕನಸು ಕಂಡಿದ್ದಳು. ಆದರೆ ಅವಕಾಶಗಳು ಬರದೆ ಕಂಗೆಟ್ಟಿದ್ದಳು. ಕಡೆಗೆ ಚಿತ್ರರಂಗದ ಸಹವಾಸವೇ ಬೇಡ ಎಂದು ಒಳಾಂಗಣ ವಿನ್ಯಾಸದಲ್ಲಿ ತಮ್ಮ ವೃತ್ತಿಜೀವನ ಆರಂಭಿಸಬೇಕೆಂದಿದ್ದರು ಎಂದಿದ್ದಾರೆ ರಬಿಯಾ.