Don't Miss!
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- News
ರಾಣೆಬೆನ್ನೂರು: "ಮೈಸೂರ ಹುಲಿ" ಎಂದೇ ಪ್ರಸಿದ್ಧಿಯಾಗಿದ್ದ ಹೋರಿ ಇನ್ನಿಲ್ಲ, ಮುಗಿಲು ಮುಟ್ಟಿದ ಆಕ್ರಂದನ
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಟಿ ಅಧಿಕಾರಿಗಳು ನನ್ನ ಮನೆಯಲ್ಲಿ ಮೂರು ವಸ್ತುಗಳಿಗಾಗಿ ಹುಡುಕಾಡಿದರು: ತಾಪ್ಸಿ
ನಟಿ ತಾಪ್ಸಿ ಪನ್ನು ಹಾಗೂ ಅನುರಾಗ್ ಕಶ್ಯಪ್ ಮನೆ ಹಾಗೂ ಕಚೇರಿಗಳ ಮೇಲೆ ಮಾರ್ಚ್ 3 ರಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಐಟಿ ರೇಡ್ ಆದ ಮೂರು ದಿನಗಳ ಬಳಿಕ ಇಂದು ತಾಪ್ಸಿ ಪನ್ನು ಟ್ವಿಟ್ಟರ್ನಲ್ಲಿ ಐಟಿ ರೇಡ್ ವಿಷಯವನ್ನು ಹಂಚಿಕೊಂಡಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನನ್ನ ಮನೆಯಲ್ಲಿ ಮೂರು ವಿಷಯಗಳಿಗಾಗಿ ಹುಡುಕಾಟ ನಡೆಸಿದರು ಎಂದು ಹೇಳಿದ್ದಾರೆ.
ಮೂರು ದಿನಗಳ ಕಾಲ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಹಳ ಉಗ್ರವಾಗಿ ಮೂರು ವಸ್ತುಗಳಿಗಾಗಿ ಹುಡುಕಾಟ ನಡೆಸಿದರು ಎಂದಿರುವ ತಾಪ್ಸಿ ಆ ಮೂರು ವಸ್ತುಗಳು ಯಾವುದು ಎಂದು ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.
ನಾನು ಪ್ಯಾರಿಸ್ನಲ್ಲಿ ಕೊಂಡುಕೊಂಡಿದ್ದೆ ಎನ್ನಲಾಗುತ್ತಿರುವ ಬಂಗ್ಲೆಯ ಬೀಗವನ್ನು ಅವರು ಹುಡುಕಾಡಿದರು. ಬೇಸಿಗೆ ರಜೆಗಳು ಹತ್ತಿರ ಬರುತ್ತಿದೆಯಲ್ಲ ಅದಕ್ಕಾಗಿ ಅವರು ಬಂಗ್ಲೆಯ ಬೀಗ ಹುಡುಕುತ್ತಿರಬಹುದು ಎಂದಿದ್ದಾರೆ ತಾಪ್ಸಿ ಪನ್ನು.
ನಾನು ಪಡೆದಿದ್ದೇನೆ ಎನ್ನಲಾಗುತ್ತಿರುವ ಐದು ಕೋಟಿ ಹಣದ ರಸೀದಿಗಾಗಿ ಅವರು ಬಹಳ ಹುಡುಕಾಟ ನಡೆಸಿದರು. ನನ್ನನ್ನು 'ಫ್ರೇಮ್' ಮಾಡಲು ಹಾಗೂ ಮುಂದೆ ನನ್ನನ್ನು ಹೆದರಿಸಲು ಅದು ಬಹಳ ಅವಶ್ಯಕವಾಗಿತ್ತು ಎಂದು ವ್ಯಂಗ್ಯ ಮಾಡಿದ್ದಾರೆ ತಾಪ್ಸಿ ಪನ್ನು.
ನಮ್ಮ ಗೌರವಾನ್ವಿತ ಹಣಕಾಸು ಸಚಿವೆ ಹೇಳಿರುವಂತೆ 2013 ರಲ್ಲಿ ನನ್ನ ಮೇಲೆ ಐಟಿ ರೇಡ್ ಆಗಿತ್ತು, ಆ ಐಟಿ ರೇಡ್ನ ನೆನಪಿಗಾಗಿ ಅವರು ಹುಡುಕಾಡಿರಬಹುದು ಎಂದು ಕಾಲೆಳೆದಿದ್ದಾರೆ ತಾಪ್ಸಿ ಪನ್ನು. ಟ್ವೀಟ್ನ ಕೊನೆಯಲ್ಲಿ 'ನಾನು ಅಗ್ಗದ ನಟಿ ಅಲ್ಲ' ಎಂದು ಸಹ ಹೇಳಿದ್ದಾರೆ ತಾಪ್ಸಿ. ನಟಿ ಕಂಗನಾ, ತಾಪ್ಸಿಯನ್ನು 'ಸಸ್ತಾ ನಟಿ' (ಅಗ್ಗದ ನಟಿ) ಎಂದು ಕರೆದಿದ್ದರು.
ಅನುರಾಗ್ ಕಶ್ಯಪ್ ಹಾಗೂ ತಾಪ್ಸಿ ಪನ್ನು ಮೇಲೆ 2013 ರಲ್ಲಿಯೇ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಆದರೆ ಅನುರಾಗ್ ಕಶ್ಯಪ್ ವಿರುದ್ಧ ಮಾತ್ರವೇ ಐಟಿ ರೇಡ್ ಆಗಿತ್ತು. ತಾಪ್ಸಿ ಪನ್ನು ಮೇಲೆ ಇದೇ ಮೊದಲ ಬಾರಿಗೆ ಐಟಿ ರೇಡ್ ಆಗಿದೆ.
Recommended Video
ತಾಪ್ಸಿ ಪನ್ನು ಹಾಗೂ ಅನುರಾಗ್ ಕಶ್ಯಪ್ ಇಬ್ಬರೂ ಸಹ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಿದ್ದರು. ಅವರನ್ನು ಹೆದರಿಸಿ ಮೌನವಾಗಿಸಲು ಈ ಐಟಿ ರೇಡ್ ಆಗಿದೆ ಎನ್ನಲಾಗುತ್ತಿದೆ.