ಅರ್ಜುನ್ ಸರ್ಜಾ ಇವರು ಜನಿಸಿದ್ದು ಆಗಸ್ಟ್ 15. 1962 ಮದುಗಿರಿಯಲ್ಲಿ. ತಂದೆ ಶಕ್ತಿ ಪ್ರಸಾದ್( ನಟ ) ತಾಯಿ ಲಕ್ಷ್ಮೀ (ಶಿಕ್ಷಕಿ). ಅಣ್ಣ ಕಿಶೋರ್ ಸರ್ಜಾ ನಿರ್ಮಾಪಕರು. ಇವರು ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ರವರ ಮಗ. ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ.
ಆದರೆ ಅವಕಾಶಗಳು ಇವರಿಗೆ ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕಾಗಿ ಹೆಸರು ಗಳಿಸಿದ್ದಾರೆ. 1981 ರಲ್ಲಿ ತೆರೆಕಂಡಿರುವ "ಸಿಂಹದ ಮರಿ ಸೈನ್ಯ" ಚಿತ್ರದ ಮೂಲಕ ಕನ್ನಡ ಚಿತ್ರ ರಂಗವನ್ನು ಪ್ರವೇಶ ಮಾಡಿದ್ದಾರೆ.
ಇದಲ್ಲದೆ ಅರ್ಜುನ ಸರ್ಜಾ ಅವರು ನಾಯಕನಾಗಿ, ನಿರ್ದೇಶಕನಾಗಿ, ನಿರ್ಮಪಕಾರಾಗಿ ಚಿತ್ರ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ.
ಇವರ ಪುತ್ರಿ ಐಶ್ವರ್ಯ ಅವರನ್ನು `ಪ್ರೇಮಬರಹ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.