ಗೋಪಾಲರಾವ್ ವಿಜಯಸಾರಥಿ
Born on
ಗೋಪಾಲರಾವ್ ವಿಜಯಸಾರಥಿ ಜೀವನಚರಿತ್ರೆ
ಗೋಪಾಲರಾವ್ ವಿಜಯಸಾರಥಿ ಕನ್ನಡ ಚಿತ್ರರಂಗದ ಪ್ರಮುಖ ಪೋಷಕ ನಟ ಮತ್ತು ಒಬ್ಬ ಅತ್ತ್ಯುತ್ತಮ ಪತ್ರಕರ್ತ. ಇವರು ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಕನ್ನಡ ಚಿತ್ರರಂಗದ ಕಲಾವಿದರಲ್ಲದೇ ಹಾಲಿವುಡ್ನ ನಟರನ್ನು ಕೂಡ ಸಂದರ್ಶನ ಮಾಡಿದ್ದಾರೆ. ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿದ `ಆಪರೇಷನ್ ಅಂತ' ಚಿತ್ರದ ಮೂಲಕ ಕನ್ನಡ ಸಿನಿಪರೆದೆಗೆ ಕಾಲಿಟ್ಟರು. ಈ ಚಿತ್ರದಲ್ಲಿ ಇವರು ನಟಿಸಿದ ರಾಜಕಾರಣಿಯ ಪಾತ್ರ ಮುಂದೆ ಇವರ ಟ್ರೇಡ್ ಮಾರ್ಕ ಆಗಿ ಸಾಕಷ್ಟು ಚಿತ್ರಗಳಲ್ಲಿ `ರಾಜಕಾರಣಿಯಾಗಿ' ನಟಿಸಿದರು. ಪತ್ರಕರ್ತರಾಗಿ ಕೇವಲ ಚಿತ್ರರಂಗದ ಬಗ್ಗೆ ಮಾತ್ರವಲ್ಲದೇ ರಾಷ್ಟೀಯ, ಅಂತರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಕೂಡ ಬರೆದಿದ್ದಾರೆ. ಇವರು ನಟಿಸಿದ ಕೊನೆಯ ಚಿತ್ರ ಮೈನಾ. ಇವರು `ಟಿ.ಎನ್.ಸೀತಾರಾಮ್',`ನಾಗತಿಹಳ್ಳಿ ಚಂದ್ರಶೇಖರ್',`ಫಣಿ ರಾಮಚಂದ್ರ',ಪಿ.ಶೇಷಾದ್ರಿ' ಮುಂತಾದವರ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.