ಗುರುರಾಜ್ ಹೊಸಕೋಟೆ
ಗುರುರಾಜ್ ಹೊಸಕೋಟೆ ಜೀವನಚರಿತ್ರೆ
ಗುರುರಾಜ ಹೊಸಕೋಟೆ ಕನ್ನಡದ ಪ್ರಸಿದ್ದ ಜಾನಪದ ಸಂಗೀತಗಾರ, ಗೀತರಚನೆಕಾರ ಮತ್ತು ಪೋಷಕ ನಟ. ಇವರು `ಜಾನಪದ ಝೇಂಕಾರ' ಕಾರ್ಯಕ್ರಮದ ಮುಖಾಂತರ ರಾಜ್ಯಾದ್ಯಂತ ಪ್ರವಾಸಮಾಡಿ ಜಾನಪದ ಸಂಗೀತದ ಅಭಿವೃದ್ದಿಗಾಗಿ ಪ್ರಯತ್ನ ಪಟ್ಟಿದ್ದಾರೆ. ಇವರು ಹಾಡಿರುವ `ಕಲಿತ ಹುಡುಗಿ ಕುದರೆ ನಡಿಗೆ' ತುಂಬಾ ಪ್ರಸಿದ್ಧವಾಗಿದೆ.`ನಂದಾದೀಪ',`ಕರ್ಣನ ಸಂಪತ್ತು',`ಶ್ರೀ ತುಲಸಿದೇವಿ ಮಹಾತ್ಮಂ' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.