ಗುರುರಾಜ್ ಜಗ್ಗೇಶ್
ಗುರುರಾಜ್ ಜಗ್ಗೇಶ್ ಜೀವನಚರಿತ್ರೆ
ಗುರುರಾಜ್ ಜಗ್ಗೇಶ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಾಯಕನಟ, ಚಿತ್ರ ಸಾಹಿತಿ ಮತ್ತು ನಿರ್ಮಾಪಕ. ಇವರು ನವರಸನಾಯಕ ಜಗ್ಗೇಶ್ರವರ ಹಿರಿಯ ಪುತ್ರ.
ಬಾಲ್ಯನಟನಾಗಿ ತಮ್ಮ ತಂದೆಯವರ `ಬೇಡ ಕೃಷ್ಣ ರಂಗಿನಾಟ' ಚಿತ್ರದಲ್ಲಿ ನಟಿಸಿದ್ದರು. 2002 ರಲ್ಲಿ ಜಗ್ಗೇಶ್ರ `ಮೇಕಪ್' ಚಿತ್ರದ ಕಥೆ ಕೂಡ ಬರೆದಿದ್ದರು. 2009 ರಲ್ಲಿ ತೆರೆಕಂಡ `ಗಿಲ್ಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಪ್ರವೇಶಿಸಿದರು. ಈ ಚಿತ್ರದ ಮೂಲಕವೇ ತೆಲುಗಿನ ಖ್ಯಾತ ನಟಿ ರಕುಲ್ ಪ್ರೀತ್ ಸಿನಿಪಯಣ ಆರಂಭಿಸಿದ್ದು.
2012 ರಲ್ಲಿ ಜಗ್ಗೇಶ್ ನಿರ್ದೇಶನದ `ಗುರು' ಚಿತ್ರದಲ್ಲಿ ನಾಯಕನಾಗಿ ನಟಿಸಿದರು. ನಂತರ ಸಂಕ್ರಾತಿ',`ಪೈಪೋಟಿ' ಚಿತ್ರಗಳಲ್ಲಿ ನಟಿಸಿದರು. ಇವರು 2014 ರಲ್ಲಿ ನೆದರ್ಲ್ಯಾಂಡ್ಸ್ನಲ್ಲಿ ಡಚ್ ದೇಶದ ಯುವತಿಯೊಂದಿಗೆ ಮದುವೆಯಾದರು.
ಸಂಬಂಧಿತ ಸುದ್ದಿ