ಮೋಹನ್ ಜುನೆಜ ಜೀವನಚರಿತ್ರೆ
ಮೋಹನ್ ಜುನೇಜಾ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟ. ಇವರು ಕಿರುತೆರೆಯ `ವಠಾರ' ಸೀರಿಯಲ್ ನಿಂದ ಜನಪ್ರಿಯರಾದರು.ಹಲವಾರು ಚಿತ್ರಗಳಲ್ಲಿ ಪೋಷಕ ನಟನಾಗಿ ಮತ್ತು ಹಾಸ್ಯನಟನಾಗಿ ರಂಜಿಸಿದ್ದಾರೆ. `ಚೆಲ್ಲಾಟ' ಚಿತ್ರದ ಮಧುಮಗನ ಪಾತ್ರ ಇವರಿಗೆ ತುಂಬಾ ಪ್ರಸಿದ್ಧಿ ತಂದುಕೊಟ್ಟಿತು.
ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ಚಿತ್ರಗಳಲ್ಲಿ ಇವರ ` ಗ್ಯಾಂಗ್ ಜೊತೆ ಬರೋನು ಗ್ಯಾಂಗ್ಸ್ಟರ್, ಅವನು ಒಬ್ಬನೇ ಬರ್ತಾನೆ, ಮಾನ್ಸ್ಟರ್' ಡೈಲಾಗ್ ತುಂಬಾ ಪ್ರಸಿದ್ಧಿಯಾಗಿತ್ತು.
ಬೆಂಗಳೂರು ಉತ್ತರದ ತಮ್ಮೇನಹಳ್ಳಿಯಲ್ಲಿ ವಾಸವಾಗಿದ್ದ ಜುನೇಜಾ ಹಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚಿಗಷ್ಟೆ ಆರೋಗ್ಯದಲ್ಲಿ ಏರುಪಾರಾದ ಕಾರಣ ಹೆಸರಘಟ್ಟದ ಸಪ್ತಗಿರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ತಮ್ಮ 54 ನೇ ವಯಸ್ಸಿನಲ್ಲಿ ನಿಧನರಾದರು.