ಮುಸುರಿ ಕಷ್ಣಮೂರ್ತಿ
Born on 10 Mar 1930 (Age 94)
ಮುಸುರಿ ಕಷ್ಣಮೂರ್ತಿ ಜೀವನಚರಿತ್ರೆ
ಮುಸುರಿ ಕೃಷ್ನಮೂರ್ತಿ ಕನ್ನಡದ ಧೀಮಂತ ನಟ. ಮೊದಮೊದಲು ಖಳನಾಯಕನಾಗಿ ಸಿನಿಪಯಣ ಆರಂಭಿಸಿದ ಇವರು ನಂತರ ಹಾಸ್ಯ ಪಾತ್ರಗಳಲ್ಲಿ ನಟಿಸಿ ಕೀರ್ತಿ ಪಡೆದರು. 1930 ರಲ್ಲಿ ಮೈಸೂರಿನ ಬೆಟ್ಟದಪುರದಲ್ಲಿ ವಿಶ್ವೇಶ್ವರಯ್ಯ ಎಂಬ ಜಮೀನ್ದಾರರ ಮಗನಾಗಿ ಜನಿಸಿದರು.
ಬಾಲ್ಯದಿಂದಲೂ ಸಂಗೀತ ಮತ್ತು ಅಭಿನಯಗಳಲ್ಲಿ ಆಸಕ್ತಿಯಿದ್ದ ಇವರು 1943 ರಲ್ಲಿ ವಾಣಿ ಚಿತ್ರದಲ್ಲಿ ಬಾಲನಟನಾಗಿ ನಟಿಸಿದರು. ಮತ್ತೆ ಹತ್ತು ವರ್ಷದ ನಂತರ 1953 ರಲ್ಲಿ ಮಂಗಳ ಗೌರಿ, ಕನ್ಯಾದಾನ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಸಿನಿಜರ್ನಿ ಆರಂಭಿಸಿದರು. ಸುಶೀಲಮ್ಮ ಎಂಬುವವರನ್ನು ವಿವಾಹವಾದ ಇವರಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯರಿದ್ದಾರೆ. ಪುತ್ರ ಜಯಸಿಂಹ ಕನ್ನಡ ಚಿತ್ರರಂಗದಲ್ಲಿ ನಟ ಮತ್ತು ನಿರ್ಮಾಪಕನಾಗಿ ಸಕ್ರಿಯವಾಗಿದ್ದಾರೆ.