ರಮೇಶ್ ಭಟ್ ಜೀವನಚರಿತ್ರೆ
ರಮೇಶ್ ಭಟ್ ಕನ್ನಡ ಚಲನಚಿತ್ರರಂಗದ ಒಬ್ಬ ಪ್ರಮುಖ ನಟರು. ಇವರು ಅನೇಕ ಹಾಸ್ಯ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿರುವ ಇವರು. ಕುಂದಾಪುರದಲ್ಲಿ ಜನಿಸಿದ್ದಾರೆ. ಇವರು ತಮ್ಮ ಬಾಲ್ಯ ವಿದ್ಯಾಬ್ಯಾಸವನ್ನು ಹುಟ್ಟುರಿನಲ್ಲಿಯೇ ಮುಗಿಸಿದ್ದಾರೆ.
ಶಿಕ್ಷಣದ ನಂತರ ಇವರು ರಂಗಭೂಮಿಯಲ್ಲಿ ನಟಿಸುವ ಮೂಲಕ 1990ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ 'ಕ್ರೇಜಿ ಕರ್ನಲ್' ಎಂಬ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು.. ಈ ಮೂಲಕ ಟಿವಿ ಕಿರುತೆರೆಗಳಲ್ಲಿ ಕಾಣಿಸಿಕೊಳ್ಳ ತೊಡಗಿದರು.
ಶಂಕರ್ ನಾಗ್ ಅವರು ನಿರ್ದೇಶನದಲ್ಲಿ ಮೂಡಿಬಂದ "ಮಾಲ್ಗುಡಿ ಡೇಸ್" ಧಾರಾವಾಹಿನಲ್ಲೂ ಇವರ ಪಾತ್ರವಿದೆ. ಇವರು ಧಾರಾವಾಯಿಗಳಲ್ಲಿ ಅಭಿನಯಕ್ಕಾಗಿ ಜನಪ್ರಿಯತೆ ಗಳಿಸಿರುವ ಇವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರು. "ಪರಮೇಶಿ ಪ್ರೇಮ ಪ್ರಸಂಗ" ಚಿತ್ರವನ್ನು ನಿರ್ದೇಶಿಸಿದ್ದ ಇವರು ಆ ಚಿತ್ರವು ನ್ಯಾಷನಲ್ ಅವಾರ್ಡ್ ಪ್ರಶಸ್ತಿ ಗೆ ಒಳಪಟ್ಟಿತ್ತು.
ಹೀಗೆ ಮಿಂಚಿನ ಓಟ, ನೋಡಿ ಸ್ವಾಮಿ ನಾವು ಇರೋದೇ ಹೀಗೆ, ಗಣೇಶ ಸುಬ್ರಮಣ್ಯ ಇನ್ನು ಅನೇಕ ಕನ್ನಡ ಚಿತ್ರಗಳಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಹೀಗೆ. ಕನ್ನಡ ಸಿನೆಮಾಗಳಲ್ಲಿ ಪೋಷಕ ನಟ, ಹಾಸ್ಯ ನಟ ಸೇರಿದಂತೆ ಹಲವಾರು ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಇವರು ಎಲ್ಲರ ಮನಗೆದ್ದಿದ್ದಾರೆ.
ರಮೇಶ್ ಭಟ್ ಇವರಿಗೆ ಲಭಿಸಿದ ಪ್ರಶಸ್ತಿಗಳು:-
* ಕರ್ನಾಟಕ ರಾಜೋತ್ಸವ ಪ್ರಶಸ್ತಿ - 2010.
* ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ - ಅತ್ಯುತ್ತಮ ಸಹಾಯಕ ಪಾತ್ರ - ಉಯ್ಯಾಲೆ(2010-11).
* ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ - ಅತ್ಯುತ್ತಮ ಸಹಾಯಕ ಪಾತ್ರ - ಮನ ಮಂಥನ(2015).