ರಂಜಿತಾ ತಮಿಳು, ತೆಲಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಖ್ಯಾತ ನಟಿ. ಕನ್ನಡದಲ್ಲಿ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ. ಶ್ರೀ ವಲ್ಲಿ ಎಂಬ ಹೆಸರಿನಿಂದ ಜನಿಸಿದ ಇವರು 1992 ಬಾರತಿರಾಜಾ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ 2000 ರಲ್ಲಿ ಆರ್ಮಿ ಮೇಜರ್ ರಾಕೇಶ್ ಮೆನನ್ ಎಂಬುವವರನ್ನು ವಿವಾಹವಾಗಿ ತಾತ್ಕಾಲಿಕವಾಗಿ ಚಿತ್ರರಂಗದಿಂದ ದೂರವಾದರು.
2001 ರಿಂದ ಕಿರುತೆರೆಯಲ್ಲಿ ಕೆಲವು ಸೀರಿಯಲ್ ಗಳಲ್ಲಿ ನಟಿಸಿತೊಡಗಿದರು. 2007 ರಲ್ಲಿ ಪತಿಯಿಂದ ದೂರವಾದರು. 2010 ರಲ್ಲಿ ಬಿಡದಿ ಆಶ್ರಮದ ಸ್ವಾಮಿ ನಿತ್ಯಾನಂದರ ಜೊತೆಗಿನ ಖಾಸಗಿ ವೀಡಿಯೋ ಲೀಕ್ ಆಗಿ ಬಹುದೊಡ್ಡ ಕಾಂಟ್ರವರ್ಸಿ ಕ್ರಿಯೇಟ್ ಮಾಡಿತು. 2013 ರಲ್ಲಿ ನಿತ್ಯಾನಂದ ಸ್ವಾಮಿಯಿಂದ ಸನ್ಯಾಸ ಸ್ವೀಕರಿಸಿ `ನಿತ್ಯಾನಂದಮಯಿ' ಎಂಬ ಹೆಸರಿನಿಂದ ನಿತ್ಯಾನಂದ ಧ್ಯಾನಪೀಠದಲ್ಲಿ ವಾಸಿಸುತ್ತಿದ್ದಾರೆ.