ರಶ್ಮಿ ಪ್ರಭಾಕರ್ ಅಯ್ಯರ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಕರ್ನಾಟಕದ ಹೊಸಕೋಟೆಯಲ್ಲಿ ಪ್ರಭಾಕರ್ ಮತ್ತು ರೇವತಿ ದಂಪತಿಗಳ ಪುತ್ರಿಯಾಗಿ ಜನಿಸಿದರು.
ಬಾಲ್ಯದ ವಿಧ್ಯಾಭ್ಯಾಸವನ್ನು ಹೊಸಕೋಟೆಯಲ್ಲಿ ಮುಗಿಸಿದ ರಶ್ಮಿ ಶೇಷಾದ್ರಿಪುರಂ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪಡೆದಿದ್ದಾರೆ. ಯಶ್ ಅಭಿನಯದ `ಮಾಸ್ಟರ್ ಪೀಸ್' ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರು ನಂತರ ಮೂಕಹಕ್ಕಿ ,BB5 , ಮಧುಬಾಲ, ಮಹಾಕಾವ್ಯ ಚಿತ್ರಗಳಲ್ಲಿ ನಟಿಸಿದರು.
ಕಿರುತೆರೆಯಲ್ಲಿ ಕೂಡ ಸಕ್ರಿಯವಾಗಿರುವ ಇವರು ಜೈ ಆಂಜನೇಯ,ಜೇವನ ಚೈತ್ರ, ಶುಭವಿವಾಹ ಮತ್ತು ಅರುಂಧತಿ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಚಿನ್ನು ಪಾತ್ರದ ಮೂಲಕ ಪ್ರಸಿದ್ಢರಾಗಿದ್ದಾರೆ.