ಸ್ಪಂದನಾ ವಿಜಯ್ ರಾಘವೇಂದ್ರ
ಸ್ಪಂದನಾ ವಿಜಯ್ ರಾಘವೇಂದ್ರ ಜೀವನಚರಿತ್ರೆ
ಸ್ಪಂದನಾ ಕನ್ನಡ ನಟ ವಿಜಯ್ ರಾಘವೇಂದ್ರ ಅವರ ಪತ್ನಿ. ಸ್ಪಂದನಾ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿವರು. ಇವರ ತಂದೆ ಬಿ.ಕೆ.ಶಿವರಾಮ್ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದರು. ಸ್ಪಂದನಾ ಮದುವೆ ಬಳಿಕ ಬೆಂಗಳೂರಿನಲ್ಲಿಯೇ ಸೆಟಲ್ ಆಗಿದ್ದರು.
ಮದುವೆ: ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ ಅವರದ್ದು ಲವ್ ಕಮ್ ಆರೆಂಜ್ಡ್ ಮ್ಯಾರೇಜ್. ಮಂಗಳೂರಿನ ಹುಡುಗಿಯನ್ನು ಮದುವೆ ಮಾಡಿಕೊಳ್ಳಬೇಕೆಂದುಕೊಂಡಿದ್ದ ವಿಜಯ್, 2004ರಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಕಾಫಿ ಡೇಯೊಂದರಲ್ಲಿ ಸ್ಪಂದನಾ ಅರನ್ನು ನೋಡಿದ್ದರು. ಈ ವೇಳೆ ಸಂಗೀತದ ವಿಚಾರವಾಗಿ ಇವರಿಬ್ಬರ ನಡುವೆ ಕ್ಲ್ಯಾಶ್ ಆಗಿತ್ತು. ನಂತರ 2007ರಲ್ಲಿ ಶೇಷಾದ್ರಿಪುರಂ ಕಾಫಿ ಡೇಯಲ್ಲಿ 2ನೇ ಬಾರಿ ಭೇಟಿಯಾಗಿ ವಿಜಯ್ ರಾಘವೇಂದ್ರ, ಸ್ಪಂದನಾ ಅವರನ್ನು ಭೇಟಿಯಾಗಿದ್ದರು. ಈ ವೇಳೆ ನನ್ನನ್ನು ಮದುವೆಯಾಗ್ತಿಯಾ ಅಂತ ಕೇಳಿದ್ದರಂತೆ. ಸ್ಪಂದನಾ ಕೂಡ ವಿಜಯ್ ಅವರ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ನಂತರ ತಂದೆ-ತಾಯಿಯ ಬಳಿ ಪ್ರೀತಿ ವಿಚಾರ ಹೇಳಿದ್ದರಂತೆ. ಬಳಿಕ ಕುಟುಂಬಸ್ಥರ ಒಪ್ಪಿಗೆ ಮೇರೆಗೆ 2007ರ ಆಗಸ್ಟ್ 26ರಂದು ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ ಸಪ್ತಪದಿ ತುಳಿದಿದ್ದರು. ಮದುವೆ ಬಳಿಕ ಈ ಜೊಡಿ ಪ್ರೇಮಿಗಳಂತೆಯೇ ಇದ್ದರು. ಈ ದಂಪತಿಗೆ ಶೌರ್ಯ ಎಂಬ 14 ವರ್ಷದ ಓರ್ವ ಮಗನಿದ್ದಾನೆ.
ನಿರ್ಮಾಣ ಹಾಗೂ ನಟನೆ: ಸ್ಪಂದನಾ ವಿಜಯ್ ರಾಘವೇಂದ್ರ ತಮ್ಮ ಪತಿ ನಟಿಸಿರುವ `ಕಿಸ್ಮತ್' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ 2016ರಲ್ಲಿ ತೆರೆಕಂಡ ಅಪೂರ್ವ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕೂಡ ಅಭಿನಯಿಸಿದ್ದರು.
ನಿಧನ: ಸ್ಪಂದನಾ ವಿಜಯರಾಘವೇಂದ್ರ ಮೂರು ದಿನಗಳ ಹಿಂದೆ ಬ್ಯಾಂಕಾಕ್ಗೆ ತೆರಳಿದ್ದರು. 2023ರ ಆಗಸ್ಟ್ 6ರಂದು ಬ್ಯಾಕಾಂಕ್ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.