ಸುಂದರ್ ರಾಜ್ ಜೀವನಚರಿತ್ರೆ
ಸುಂದರ್ ರಾಜ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಮತ್ತು ಪ್ರತಿಭಾನ್ವಿತ ನಟ. ಇವರ ಪತ್ನಿ ಪ್ರಮೀಳಾ ಜೋಷಾಯಿ ಮತ್ತು ಪುತ್ರಿ ಮೇಘನಾ ರಾಜ್ ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.
ತಮಿಳುನಾಡು ಮೂಲದ ಇವರು ಖ್ಯಾತ ರಂಗಕರ್ಮಿ ಬಿ.ವಿ.ಕಾರಂತರ ತಂಡದಲ್ಲಿದ್ದರು. ನಂತರ ಚಿತ್ರರಂಗ ಪ್ರವೇಶಿಸಿದ ಇವರು `ಕಾಡು',`ಪಲ್ಲವಿ ಅನುಪಲ್ಲವಿ',`ಇಮ್ಮಡಿ ಪುಲಕೇಶಿ',`ವಿಜಯ ಕ್ರಾಂತಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.ಕೆಲವು ತಮಿಳು ಚಿತ್ರಗಳಲ್ಲಿ ನಟಿಸಿರುವ ಇವರು ಕೆಲ ಚಿತ್ರಗಳಲ್ಲಿ ಖಳನಾಯಕನ ಪಾತ್ರ ಕೂಡ ಮಾಡಿದ್ದಾರೆ. ಕೆಲ ಕಾಲ ಕರ್ನಾಟಕ ಕಲಾವಿದ ಸಂಘದ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿರುವ ಇವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ.