ಯಶಸ್ ಸೂರ್ಯ ಜೀವನಚರಿತ್ರೆ
ಯಶಸ್ ಸೂರ್ಯ ಕನ್ನಡದ ಉದಯೋನ್ಮುಖ ನಟ. 2007ರಲ್ಲಿ ತೆರೆಕಂಡ ಯುಗ ಯುಗಗಳೇ ಸಾಗಲಿ ಎಂಬ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟರು.
ನಂತರ 2009ರಲ್ಲಿ ಶಶಿರ ಸಿನಿಮಾದಿಂದ ಗಮನ ಸೆಳೆದರು. ಆನಂತರ ಚಿಂಗಾರಿ, ಜಿಲೇಬಿ, ಪರಮಶಿವ, ಚಕ್ರವರ್ತಿ, ಸೈಕೋ ಶಂಕರ, ರಾಮ ಧ್ಯಾನ್ಯ, ಚಿಟ್ಟೆ, ಒಡೆಯ ಹೀಗೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
2019ರಲ್ಲಿ ಬಿಡುಗಡೆಯಾಗಿದ್ದ ಕುರುಕ್ಷೇತ್ರ ಚಿತ್ರದಲ್ಲಿ ಸಹದೇವನ ಪಾತ್ರ ನಿರ್ವಹಿಸಿದ್ದರು. ಸದ್ಯ ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದಲ್ಲಿ ನಟಿಸುವ ಮೂಲಕ ಹೀರೋ ಆಗಿ ಕಂಬ್ಯಾಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿ ಪಾತ್ರ ನಿರ್ವಹಿಸಿದ್ದಾರೆ.