Don't Miss!
- Technology ನಾಳೆ ಸ್ಟೈಲಿಶ್ ರಿಂಗ್ ಡಿಸೈನ್ ಇರುವ ಈ ಫೋನ್ ಖರೀದಿಗೆ ಲಭ್ಯ!..ಬೆಲೆ 6,999ರೂ.!
- Automobiles ಅಜ್ಜಿ-ಮೊಮ್ಮಗಳಿಗಷ್ಟೇ ಉಚಿತ ಪ್ರಯಾಣ, ಪಕ್ಷಿಗಳಿಗಲ್ಲ: KSRTC ಬಸ್ನಲ್ಲಿ ಬರ್ಡ್ಸ್ಗಳಿಗೆ ಟಿಕೆಟ್ ಎಷ್ಟು?
- News ಮೋದಿ ವಿರುದ್ಧ ಮಾತನಾಡಿದರೆ ದೊಡ್ಡವರಾಗುತ್ತೇವೆ ಎಂಬ ಭ್ರಮೆ ಇದೆ: ಯಡಿಯೂರಪ್ಪ ತಿರುಗೇಟು
- Finance ವಿಶ್ವಸುಂದರಿ ಸ್ಪರ್ಧೆಗೆ ಸೌದಿಅರೇಬಿಯಾದಿಂದ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ ಈ ಯುವತಿ
- Sports Shivam Dubey: ಎಲ್ಲೂ ಸಲ್ಲದವರೂ ಸಿಎಸ್ಕೆ ಪರ ಆರ್ಭಟಿಸುತ್ತಿರುವುದು ಹೇಗೆ?
- Lifestyle ಕಾಟೇರ ಸಿನಿಮಾದಂತೆ ಬಗೆದಷ್ಟು ಸಿಗುತ್ತಿವೆ ಅಸ್ಥಿಪಂಜರಗಳು..! ಇದು ಮಹಾಮಾರಿ ಕೃತ್ಯ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಯಮಾಲಾ ಸುಳ್ಳಿಯಾ? : ಕೇರಳ ಪೊಲೀಸರಿಂದ ವಿಚಾರಣೆ
ಕೇರಳ ಪೊಲೀಸರ ತಂಡ ನಗರ ಪೊಲೀಸ್ ಆಯುಕ್ತ ಎನ್.ಅಚ್ಯುತರಾವ್ ಅವರನ್ನು ಭೇಟಿ ಮಾಡಿ, ಪ್ರಕರಣದ ತನಿಖೆಗೆ ಸಹಕಾರ ಕೋರಿದೆ.
ಈ ಸಂಬಂಧ ನಟಿ ಜಯಮಾಲಾ ಅವರನ್ನು ಪೊಲೀಸರ ತಂಡ ಭೇಟಿ ಮಾಡಲಿದೆ. ಪಾದಸ್ಪರ್ಶ ಘಟನೆಯ ಸತ್ಯಾಸತ್ಯತೆ ಬಗ್ಗೆ ವಿಚಾರಣೆ ನಡೆಸಲಿದೆ. ಜೊತೆಗೆ 20ವರ್ಷ ಹಿಂದಿನ ಘಟನೆ ಬಗ್ಗೆ ಭವಿಷ್ಯ ನುಡಿದು, ವಿವಾದಕ್ಕೆ ಕಾರಣರಾದ ಜ್ಯೋತಿಷಿ ಉನ್ನಿಕೃಷ್ಣನ್ ಅವರನ್ನು ಸಹಾ ಕೇರಳ ಪೊಲೀಸರ ತಂಡ ವಿಚಾರಣೆಗೆ ಒಳಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಸಮ್ಮತಿ :
ಅಯ್ಯಪ್ಪ ಸ್ವಾಮಿ ಪಾದಸ್ಪರ್ಶ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಈ ಸಂಬಂಧ ತನಿಖೆಗೆೆ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂಬ ಅರ್ಜಿಯನ್ನು ಕೇರಳ ಹೈಕೋರ್ಟ್ ಮಂಗಳವಾರ(ಜು.4)ಅಂಗೀಕರಿಸಿದೆ.
ಜ್ಯೋತಿಷಿ ಜಯಕುಮಾರ್ ಈ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ, ಕೇರಳ ಸರ್ಕಾರ ಮತ್ತು ಟ್ರಾವಂಕೂರ್ ದೇವಸ್ವಂ ಮಂಡಳಿಗೆ ನೋಟಿಸ್ ನೀಡಿದೆ. ನಾಲ್ಕು ವಾರಗಳಲ್ಲಿ ವಿವರಣೆ ನೀಡುವಂತೆ ಸೂಚನೆ ನೀಡಿದೆ.
ಜಯಮಾಲಾ ಸುಳ್ಳಿಯೇ? :
'ತಾಯಿಸಾಹೇಬ", 'ತುತ್ತೂರಿ" ಚಿತ್ರಗಳ ನಿರ್ಮಾಣದ ಮೂಲಕ ತಮ್ಮ ಸದಭಿರುಚಿ ಬಿಂಬಿಸಿರುವ, ಜಯಮಾಲಾ ತಮ್ಮ ಸುದೀರ್ಘ ಅವಧಿಯ ಕಲಾಬದುಕಿನಲ್ಲಿ ಸುಳ್ಳುಹೇಳಿದವರಲ್ಲ. ಅಂತಹ ಯಾವ ಪ್ರಕರಣವೂ ಬೆಳಕಿಗೆ ಬಂದಿಲ್ಲ. ಆದರೆ ಅಯ್ಯಪ್ಪನ ಘಟನೆ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಅವರ ವ್ಯತಿರಿಕ್ತ ಹೇಳಿಕೆಗಳು ಸಂಶಯಕ್ಕೆ ನೀರೆರೆದಿವೆ.
'ಜನರ ತಳ್ಳಾಟದಲ್ಲಿ ನಾನು ಕೆಳಕ್ಕೆ ಬಿದ್ದೆ. ಆವಾಗ ಅಯ್ಯಪ್ಪನ ಪಾದ ಸ್ಪರ್ಶಿಸಿದೆ" ಎಂದಿದ್ದ ಜಯಮಾಲಾ, ಪತ್ರಿಕೆಯಾಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ಬದಲಿಸಿದ್ದಾರೆ. 'ದೇವಸ್ಥಾನದ ಅರ್ಚಕರಿಗೆ ತೊಂದರೆಯಾಗಬಹುದೆಂದು ನಾನು ಘಟನೆ ತಿರುಚಿದೆ. ದೇವಸ್ಥಾನದ ಸಿಬ್ಬಂದಿಯೇ ಅಯ್ಯಪ್ಪನ ದರ್ಶನಕ್ಕೆ ಅಂದು ಅವಕಾಶ ಕಲ್ಪಿಸಿದ್ದರು. ಆಗ ಅಯ್ಯಪ್ಪನ ಪಾದ ಸ್ಪರ್ಶಿಸಿದೆ" ಎಂದಿದ್ದಾರೆ. ಸುಳ್ಳು ಯಾವುದೋ ಸತ್ಯ ಯಾವುದೋ ಅಯ್ಯಪ್ಪನೇ ಬಲ್ಲ!
ಇನ್ನೊಂದು ವಿವಾದ :
1987ರಲ್ಲಿ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವರನ್ನು ನಾನೂ ದರ್ಶನ ಮಾಡಿದ್ದೇನೆ. ನನ್ನನ್ನು ಯಾರೂ ಅಲ್ಲಿ ತಡೆಯಲಿಲ್ಲ ಎಂದು ಹಿರಿಯ ನಟಿ ಗಿರಿಜಾಲೋಕೇಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಜಯಮಾಲಾ ಪಾದಸ್ಪರ್ಶ ಮಾಡಿದ್ದು ಅನುಮಾನ. ಹೇಗೆ ಎಡವಿಬಿದ್ದರೂ ಪಾದ ಮುಟ್ಟೋದು ಅಸಾಧ್ಯ ಅನ್ನೋ ಸಂಶಯವನ್ನು ಸಹಾ ಅವರು ವ್ಯಕ್ತಪಡಿಸಿದ್ದಾರೆ.
ಕೊಸರು : ತಮ್ಮ ಹೇಳಿಕೆ ಮೂಲಕ ಗಿರಿಜಾ ಲೋಕೇಶ್ ಹೊಸ ವಿವಾದಕ್ಕೆ ತುಪ್ಪ ಸುರಿದಿದ್ದಾರೆ! ಯಾಕೋ ಇನ್ನೂ ಬೆಂಕಿ ಹತ್ತಿಕೊಂಡಿಲ್ಲ!
ಅಯ್ಯಪ್ಪನಿಗೆ
ಜಯಮಾಲಾರಿಂದ
ಅಪಚಾರ?