Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಜನಿಕಾಂತ್ ಎಂಧಿರನ್ಗೆ ಮತ್ತೊಂದು ಪೀಕಲಾಟ!
ರಜನಿಕಾಂತ್ 'ಎಂಧಿರನ್' ಚಿತ್ರಕ್ಕೆ ವಿಘ್ನಗಳ ಮೇಲೆ ವಿಘ್ನಗಳು ಎದುರಾಗುತ್ತಿವೆ. ತೀರಾ ಇತ್ತೀಚೆಗಷ್ಟೆ ತಮಿಳಿನ ಸಾಹಿತಿಯೊಬ್ಬರು ನನ್ನ ಕತೆಯೊಂದನ್ನು ಕದ್ದು 'ಎಂಧಿರನ್' ಸಿನಿಮಾ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈಗ ತೆಲುಗು ಸಾಹಿತಿಯೊಬ್ಬರು 'ಎಂಧಿರನ್' ಚಿತ್ರ ತಾವು ಬರೆದ ಕಥೆಯೊಂದರ ಕದ್ದ ಮಾಲು ಎಂದು ಆರೋಪಿಸಿದ್ದಾರೆ.
ತೆಲುಗಿನ ಖ್ಯಾತ ಕಾದಂಬರಿಕಾರ ಮೈನಂಪಾಟಿ ಭಾಸ್ಕರ್ ಎಂಬುವವರು 1984ರಲ್ಲಿ ಪ್ರಕಟವಾದ'ಬುದ್ಧಿ ಜೀವಿ' ಎಂಬ ಕಾದಂಬರಿ ಆಧಾರವಾಗಿ 'ಎಂಧಿರನ್' ಚಿತ್ರವನ್ನು ತೆರೆಗೆ ತರಲಾಗಿದೆ. ಕಾದಂಬರಿಯಲ್ಲಿನ ಜೋಕ್ಸನ್ನು ಹಾಗೆಯೇ ಯಥಾವತ್ತಾಗಿ ಭಟ್ಟಿ ಇಳಿಸಿದ್ದಾರೆ ಎಂದು ಮೈನಂಪಾಟಿ ಆರೋಪಿಸಿದ್ದಾರೆ.
ಈ ಸಂಬಂಧ ಅವರು ಸನ್ ಪಿಕ್ಚರ್ಸ್ ಮಾಲೀಕ ಹಾಗೂ ಚಿತ್ರದ ನಿರ್ಮಾಪಕ ಕಲಾನಿಧಿ ಮಾರನ್,ಚಿತ್ರದ ನಿರ್ದೇಶಕ ಶಂಕರ್ ಹಾಗೂ ನಟ ರಜನಿಕಾಂತ್ ಅವರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ತಮ್ಮ ಕಾದಂಬರಿಯನ್ನು ಬಳಸಿಕೊಂಡಿದ್ದಕ್ಕ್ಕೆ ರು.50 ಲಕ್ಷ ನಷ್ಟ ತುಂಬಿಕೊಡುವಂತೆ ಮೈನಂಪಾಟಿ ಆಗ್ರಹಿಸಿದ್ದಾರೆ.
ಅತ್ತ ತಮಿಳಿನ ಲೇಖಕ ಆರೂರು ತಮಿಳುನಾಥನ್ ಎಂಬುವವರು ತಮ್ಮ 'ಜುಗಿಬಾ' ಎಂಬ ಕತೆಯನ್ನು ಕದ್ದಿರುವುದಾಗಿ ಆರೋಪಿಸಿದ್ದು 'ಎಂಧಿರನ್' ಚಿತ್ರತಂಡಕ್ಕೆ ನೋಟೀಸ್ ಕಳುಹಿಸಿದ್ದಾರೆ. ಇವರು ರು.1ಕೋಟಿ ನಷ್ಟ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ 'ಎಂಧಿರನ್' ಚಿತ್ರಕ್ಕೆ ವಿಚಿತ್ರ ಪೀಕಲಾಟ ಎದುರಾಗಿದೆ. ಪ್ರಚಾರ ಹಾಗೂ ದುಡ್ಡು ಮಾಡುವ ಉದ್ದೇಶದಿಂದ ಎಂಧಿರನ್ ಚಿತ್ರದ ಮೇಲೆ ಹೀಗೆ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.