Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಜನಿ ಪಾದಕ್ಕೆರಗಿ ಐಶ್ವರ್ಯ ರೈ ಶಿರಸಾಸ್ಟಾಂಗ ನಮಸ್ಕಾರ
'ರಾಜ್ ನೀತಿ' ಚಿತ್ರ ಬಿಡುಗಡೆ ಸಂದರ್ಭದಲ್ಲಿ ಮನೋಜ್ ಬಾಜ್ ಪೈ ಅವರ ಕಾಲಿಗೆ ಕತ್ರಿನಾ ಕೈಫ್ ಬಿದ್ದು ಆಶೀರ್ವಚನ ಪಡೆದಿದ್ದರು. ಇದೀಗ ತಮಿಳು ಚಿತ್ರನಟ ರಜನಿಕಾಂತ್ ಕಾಲಿಗೆ ಐಶ್ವರ್ಯ ರೈ ಎರಗಿ ಶಿರಸಾಸ್ಟಾಂಗ ನಮಸ್ಕಾರ ಮಾಡಿದ ಘಟನೆ ವರದಿಯಾಗಿದೆ.
ರಜನಿಕಾಂತ್, ಐಶ್ವರ್ಯ ರೈ ಮುಖ್ಯಭೂಮಿಕೆಯಲ್ಲಿರುವ ಚಿತ್ರ 'ಎಂಧಿರನ್' ಚಿತ್ರೀಕರಣ ಮುಗಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಅನಿರೀಕ್ಷಿತ ಘಟನೆಯಿಂದ ರಜನಿಕಾಂತ್ ತಬ್ಬಿಬ್ಬಾಗಿದ್ದಾರೆ. ಬಳಿಕ ಸಾವರಿಸಿಕೊಂಡು ಆಶೀರ್ವದಿಸಿದ್ದಾಗಿ ಚೆನ್ನೈ ಮೂಲಗಳು ತಿಳಿಸಿವೆ.
ಸುದೀರ್ಘ ಎರಡು ವರ್ಷಗಳಿಂದ 'ಎಂಧಿರನ್' ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗಷ್ಟೇ ಚಿತ್ರೀಕರಣ ಮುಕ್ತಾಯವಾಗಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಐಶ್ವರ್ಯ ರೈ ಕಾಲಿಗೆ ಎರಗಿದ ಬಳಿಕ ರಜನಿಕಾಂತ್ ಅವರಿಗೆ ಮಾತೆ ಹೊರಡಲಿಲ್ಲವಂತೆ. ಬಳಿಕ ಚೇತರಿಸಿಕೊಂಡು ನಿಮ್ಮ ಮಾವನವರ ನಟನೆ ಎಂದರೆ ನನಗಿಷ್ಟ ಎಂದರಂತೆ.
ಒಟ್ಟಿನಲ್ಲಿ ಈ ಬಹುನಿರೀಕ್ಷಿತ ಚಿತ್ರದ ಧ್ವನಿಸುರುಳಿ ಜುಲೈ 31ರಂದು ಕೌಲಾಲಂಪುರದಲ್ಲಿ ಬಿಡುಗಡೆಯಾಗಲಿದೆ. ಎ ಆರ್ ರೆಹಮಾನ್ ಸಂಗೀತ ಸಂಯೋಜಿಸಿರುವ ಚಿತ್ರ ಇದಾಗಿದೆ. ಚಿತ್ರದ ನಿರ್ಮಾಪಕ ಕಲಾನಿಧಿ ಮಾರನ್ ಸಹ ಐಶ್ವರ್ಯ ರೈ ಅವರ ಅನಿರೀಕ್ಷಿತ ಘಟನೆಯಿಂದ ಚಕಿತರಾದರು ಎನ್ನುತ್ತವೆ ಮೂಲಗಳು.