twitter
    For Quick Alerts
    ALLOW NOTIFICATIONS  
    For Daily Alerts

    ಜಯಮಾಲಾ, ಶಬರಿಮಲೆ ವಿವಾದ ಅಧಿಕಾರಿ ಬಂಧನ

    By Staff
    |

    ತಿರುವನಂತಪುರಂ, ಜು. 23 : ನಟಿ ಜಯಮಾಲಾ ಅವರು ಶಬರಿಮಲೆ ಅಯ್ಯಪ್ಪ ದೇಗುಲದ ಗರ್ಭಗುಡಿ ಪ್ರವೇಶಿಸಿದ್ದರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಗುಲದ ಮಾಜಿ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ. ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ವಿ ಎಸ್ ರಾಜಗೋಪಾಲ್ ಅವರನ್ನು ಅಪರಾಧ ಪತ್ತೆ ವಿಭಾಗದ ಪೊಲೀಸರು ಕೊಟ್ಟಾಯಂ ನಲ್ಲಿ ಬಂಧಿಸಿದ್ದಾರೆ.

    ಈ ಪ್ರಕರಣದಲ್ಲಿ ಒಬ್ಬ ಜ್ಯೋತಿಷಿಯು ಸೇರಿದಂತೆ ಮೂವರು ವ್ಯಕ್ತಿಗಳ ಸಂಚಿನ ಫಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ದೇವಾಲಯಕ್ಕೆ ಸಂಬಂಧಿಸಿ ದೇವಪ್ರಶ್ನೆ ಕಾರ್ಯಕ್ರಮ ನಡೆಸಿದಾಗ ರಾಜಗೋಪಾಲ್ ಅವರು ಜಯಮಾಲಾ ಅವರ ಬೆಂಗಳೂರಿನ ನಿವಾಸಕ್ಕೆ ದೂರವಾಣಿ ಕರೆಮಾಡಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ದೇವಪ್ರಶ್ನೆ ವೇಳೆ ಮಹಿಳೆಯೊಬ್ಬರು ಗರ್ಭಗುಡಿ ಪ್ರವೇಶಿಸಿದ್ದರು ಎಂದು ಕಂಡುಬಂದಿತ್ತು.

    ಶಬರಿಮಲೆ ದೇವಾಲಯದಲ್ಲಿ 10 ರಿಂದ 50 ವರ್ಷವರೆಗಿನ ಮಹಿಳೆಯರು ಗರ್ಭಗುಡಿ ಪ್ರವೇಶಿಸುವಂತಿಲ್ಲ. ಜನಜಂಗುಳಿಯ ವೇಳೆ ನನ್ನನ್ನು ಗರ್ಭಗುಡಿಯ ಒಳಗೆ ತಳ್ಳಲಾಗಿತ್ತು ಎಂದು ಜಯಮಾಲಾ ಆಡಳಿತ ಮಂಡಳಿಗೆ ಫ್ಯಾಕ್ಸ್ ಸಂದೇಶ ಕಳುಹಿಸಿದ್ದರು. ಜಯಮಾಲಾ ಅವರನ್ನು ಆರೋಪಿಯೆಂದು ಪೊಲೀಸರು ಪರಿಗಣಿಸದೆ ಕೇಸ್ ವಾಪಾಸ್ ಪಡೆದಿದ್ದಾರೆ.

    (ದಟ್ಸ್ ಕನ್ನಡ ವಾರ್ತೆ)

    Thursday, July 23, 2009, 11:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X