ಪರಾರಿಯಾದ ನಟ ಒರಟ ಪ್ರಶಾಂತ್ ಇನ್ನೂ ಪತ್ತೆಯಿಲ್ಲ

ಬಳಿಕ ಪ್ರಶಾಂತ್ನನ್ನು ಸಂಜಯನಗರ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಅಂದು ಕಾಂಪೌಂಡ್ ಹಾರಿ ಪರಾರಿಯಾಗಿರುವ ನಟ ಇದುವರೆಗೂ ಸಿಗದೆ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಶಾಂತ್ ಪತ್ನಿ ಶಶಿರೇಖಾ ಅವರು ಹಲಸೂರುಗೇಟ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೊಟ್ಟ ದೂರಿನ ಅನ್ವಯ ಪೊಲೀಸರು ಪ್ರಶಾಂತ್ಗಾಗಿ ಬಲೆ ಬೀಸಿದ್ದಾರೆ.
ಹಲಸೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಾಗಿದೆ. ಪ್ರಶಾಂತ್ ಹಾಗೂ ಶಶಿರೇಖಾ ಮದುವೆಯಾಗಿ ಎಂಟು ವರ್ಷ ಕಳೆದಿದೆ. ದಂಪತಿಗೆ ಐದು ವರ್ಷದ ಮಗು ಇದೆ. ಕಳೆದ ಕೆಲವು ತಿಂಗಳಿಂದ ಪತಿ ಪತ್ನಿಯರಿಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಇವರಿಬ್ಬರಿಗೂ ಕೋರ್ಟ್ ವಿವಾಹ ವಿಚ್ಛೇದನ ನೀಡಿರಲಿಲ್ಲ. ನಾಗಶೆಟ್ಟಿಹಳ್ಳಿಯಲ್ಲಿ ಪ್ರಶಾಂತ್ ಒಂದು ಕಚೇರಿಯನ್ನು ನಿರ್ವಹಿಸುತ್ತಿದ್ದರು. ಅಲ್ಲಿಗೆ ಆತನ ಪತ್ನಿ ಶಶಿರೇಖಾ ಆಗಾಗ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದರು.
ಒಂದು ಅಪಾರ್ಟ್ಮೆಂಟ್ ಫ್ಲಾಟ್ನಲ್ಲಿರುವ ಆ ಕಚೇರಿಯಲ್ಲಿ ಮತ್ತೊಬ್ಬ ಯುವತಿಯೊಂದಿಗೆ ಪ್ರಶಾಂತ್ ಆತ್ಮೀಯವಾಗಿರುತ್ತಿರುವುದನ್ನು ಮನಗಂಡ ಶಶಿರೇಖಾ, ತನ್ನ ಬಂಧು ಮಿತ್ರರ ಸಹಾಯದೊಂದಿಗೆ ಪೊಲೀಸರೊಂದಿಗೆ ಬಂದು ಪ್ರಶಾಂತ್ನನ್ನು ಸಂಜಯನಗರ ಪೊಲೀಸ್ ಠಾಣೆಗೆ ಕರೆತಂದಿದ್ದರು.
ಕೋರ್ಟ್ನಲ್ಲಿ ಕೇಸಿದೆ, ಶಶಿರೇಖಾ ಹಾಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರ ಕಣ್ಣಿಗೆ ಮಂಕುಬೂದಿ ಎರಚಿ ಪ್ರಶಾಂತ್ ಪೊಲೀಸ್ ಠಾಣೆಯಿಂದ ಗೋಡೆ ಹಾರಿ ಪರಾರಿಯಾಗಿದ್ದ. ಪ್ರಶಾಂತ್ ತಪ್ಪಿಸಿಕೊಳ್ಳಲು ಪೊಲೀಸರ ನಿರ್ಲಕ್ಷ್ಯವೇ ಕಾರಣ. ನನಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಶಶಿರೇಖಾ ದೂರು ದಾಖಲಿಸಿದ್ದರು. ಪ್ರಶಾಂತ್ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು. ಒಂದು ವೇಳೆ ಪ್ರಶಾಂತ್ ಪೊಲೀಸರಿಗೆ ಸಿಕ್ಕಿದರೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











