Just In
Don't Miss!
- Sports
ಐಎಸ್ಎಲ್: ಮುಂಬೈ ವಿರುದ್ಧದ ಪಂದ್ಯ, ಒತ್ತಡದಲ್ಲಿ ಚೆನ್ನೈಯಿನ್
- News
56 ಇಂಚ್ ಎದೆಯ ವ್ಯಕ್ತಿಗೆ ಚೀನಾ ಹೆಸರೆತ್ತುವ ತಾಕತ್ತಿಲ್ಲ: ರಾಹುಲ್ ಗಾಂಧಿ
- Lifestyle
ಸೋಮವಾರದ ಭವಿಷ್ಯ: ಕರ್ಕ ರಾಶಿಯವರಿಗೆ ದಿನ ಉತ್ತಮ, ಉಳಿದ ರಾಶಿಫಲ ನೋಡಿ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕನ್ನಡ ಡಬ್ಬಿಂಗ್ ಗೆ ದಿಡ್ಡಿ ಬಾಗಿಲು ತೆರೆದ ಶ್ವೇತನಾಗು
'ಶ್ವೇತನಾಗು' ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿದ ನಿರ್ಮಾಪಕರ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಈ ಮೂಲಕ ಚಲನಚಿತ್ರ ವಾಣಿಜ್ಯ ಮಂಡಳಿ ಡಬ್ಬಿಂಗ್ ಚಿತ್ರಗಳನ್ನು ಪರೋಕ್ಷವಾಗಿ ಬೆಂಬಲಿಸಿದಂತಾಗಿದೆ ಎಂಬ ದೂರು ಚಿತ್ರೋದ್ಯಮದಲ್ಲಿ ಕೇಳಿಬರುತ್ತಿದೆ.
ಈ ಮಧ್ಯೆ ಖಾಸಗಿ ಟಿವಿ ವಾಹಿನಿಯೊಂದು ಮಲಯಾಳಂ ಮೂಲದ ಭಕ್ತಿಗೀತೆಗಳನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡುತ್ತಿದೆ. ಇದೇ ವಾಹಿನಿ 'ಶ್ವೇತನಾಗು' ಡಬ್ಬಿಂಗ್ ಚಿತ್ರವನ್ನು ಈ ಹಿಂದೆ ಎರಡು ಬಾರಿ ಪ್ರಸಾರ ಮಾಡಿತ್ತು. ಈ ಚಿತ್ರವನ್ನು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಕೆಸಿಎನ್ ಚಂದ್ರಶೇಖರ್ ಸೇರಿದಂತೆ ಮತ್ತಿಬ್ಬರು ನಿರ್ಮಿಸಿದ್ದರು.
ಶ್ವೇತನಾಗು ಚಿತ್ರವನ್ನು ಪ್ರಸಾರ ಮಾಡಿದ್ದಕ್ಕೆ ಸುವರ್ಣ ವಾಹಿನಿ ಮಂಡಳಿಯ ಕ್ಷಮೆಯಾಚಿಸಿ, ಇದು ಡಬ್ಬಿಂಗ್ ಚಿತ್ರ ಎಂಬ ಅಂಶವನ್ನು ನಿರ್ಮಾಪಕರು ನಮ್ಮಿಂದ ಮುಚ್ಚಿಟ್ಟಿದ್ದರು ಎಂದು ದೂರಿತ್ತು. ಆದರೆ ನಿರ್ಮಾಪಕರಾದ ಎಚ್ ಎನ್ ಮಾರುತಿ, ಅಜಂತ ರಾಜು ಅವರ ವಿರುದ್ಧ ಮಂಡಳಿಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಈ ಪರಿಸ್ಥಿತಿಯಲಾಭ ಪಡೆದು ಡಬ್ಬಿಂಗ್ ಚಿತ್ರಗಳನ್ನು ಅಥವಾ ಧಾರಾವಾಹಿಗಳನ್ನು ಮಾಡಲು ಬಿಡುವುದಿಲ್ಲ ಎಂದು ಕೆಸಿಎನ್ ಚಂದ್ರಶೇಖರ್ ಗುಡುಗಿದ್ದರು. ಕನ್ನಡ ಚಿತ್ರರಂಗದಲ್ಲಿದ್ದ ಅಲಿಖಿತ ನಿಯಮವನ್ನು ಶ್ವೇತನಾಗು ಚಿತ್ರ ಮುರಿಯುವ ಮೂಲಕ ಕನ್ನಡ ಡಬ್ಬಿಂಗ್ ಚಿತ್ರಗಳಿಗೆ ಬಾಗಿಲು ತೆರೆದಂತಾಗಿದೆ ಎಂಬ ಆರೋಪವೂ ಚಿತ್ರೋದ್ಯಮದಲ್ಲಿ ಪ್ರತಿಧ್ವನಿಸಿದೆ.
ಡಬ್ಬಿಂಗ್ ಚಿತ್ರಗಳ ಭಾಗವಾಗಿ ಈಗ ಮಲಯಾಳಂ ಮೂಲದ ಭಕ್ತಿಗೀತೆಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿವೆ. ಮುಂಜಾನೆ ಪ್ರಸಾರವಾಗುವ ಈ ಭಕ್ತಿಗೀತೆಗಳಿಗೆ ಕನ್ನಡ ಧ್ವನಿಯನ್ನು ಮಾತ್ರ ಸೇರಿಸಲಾಗಿದೆ. ಉಳಿದಂತೆ ಈ ಗೀತೆಗಳು ಮಲಯಾಳಂನಲ್ಲೇ ಚಿತ್ರೀಕರಣಗೊಂಡಿವೆ. ಈ ಬೆಳವಣಿಗೆಯನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಅವರ ಗಮನಕ್ಕೆ ತಂದಾಗ, ಕಾರ್ಯಕ್ರಮವನ್ನೊಮ್ಮೆ ವೀಕ್ಷಿಸಿ ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕನ್ನಡದಲ್ಲಿಡಬ್ಬಿಂಗ್ ಚಿತ್ರಗಳಿಗೆ 1960ರಲ್ಲೇ ನಿಷೇಧ ಹೇರಲಾಗಿತ್ತು. ಡಬ್ಬಿಂಗ್ ಧಾರಾವಾಹಿಗಳಿಗೆ 1990ರಲ್ಲಿ ವಿರೋಧ ವ್ಯಕ್ತವಾಗಿತ್ತು. ಸಂಜಯ್ ಖಾನ್ ರ ಜನಪ್ರಿಯ ಧಾರಾವಾಹಿ'ದಿ ಸ್ವಾರ್ಡ್ ಆಫ್ ಟಿಪ್ಪು ಸುಲ್ತಾನ್' ಕನ್ನಡ ಡಬ್ಬಿಂಗ್ ಗೆ ರಾಜ್ ಕುಮಾರ್ ನೇತೃತ್ವದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಏತನ್ಮಧ್ಯೆ ರಮಾನಂದ ಸಾಗರ್ ಅವರ 'ರಾಮಾಯಣ' ಧಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡುವ ವಿಫಲ ಪ್ರಯತ್ನವೂ ನಡೆಯಿತು. ಮತ್ತೊಂದು ಆಶ್ಚರ್ಯಕರವಾದ ಸಂಗತಿಯೆಂದರೆ ಶಂಕರನಾಗ್ ನಿರ್ದೇಶನದ 'ಮಾಲ್ಗುಡಿ ಡೇಸ್'ನ್ನು ಕನ್ನಡಕ್ಕೆ ಡಬ್ ಮಾಡುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ 'ಮಾಲ್ಗುಡಿ ಡೇಸ್' ಕನ್ನಡಕ್ಕೆ ಡಬ್ ಆಗಲಿಲ್ಲ.
(ದಟ್ಸ್ ಕನ್ನಡ ಚಿತ್ರವಾರ್ತೆ)