ನಿರ್ಮಾಪಕ ಕೃಷ್ಣೇಗೌಡ ನಾಯಕನಾಗಿ ನಟಿಸಿರುವ `ಅರಬ್ಬೀ ಕಡಲ ತೀರದಲ್ಲಿ' ಚಿತ್ರ ಕ್ರೈಮ್ ಥ್ರಿಲ್ಲರ್ ಕಥಾನಕ ಹೊಂದಿದೆ. ಚಿತ್ರದಲ್ಲಿ ನಾಯಕಿಯರಾಗಿ ವೈಷ್ಣವಿ ಚಂದ್ರನ್,ರಂಜಿತಾ ಅಭಿನಯಿಸಿದ್ದಾರೆ.
ರಮೇಶ್ ಭಟ್, ವೀಣಾ ಸುಂದರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೃಷ್ಣೇಗೌಡರೇ ಬಂಡವಾಳ ಹೂಡಿರುವ ಈ ಚಿತ್ರವನ್ನು ವಿ.ಉಮಾಕಾಂತ್ ನಿರ್ದೇಶಿಸಿದ್ದಾರೆ.