ಗೆಳೆಯ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ತರುಣ್ ಚಂದ್ರ ನಾಯಕರಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಹರ್ಷ ಎ ಅವರ ನಿರ್ದೇಶನದಲ್ಲಿ ಮತ್ತು ಮನೋ ಮೂರ್ತಿ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಇಬ್ಬರು ಕಾಲೇಜ್ ಸ್ನೇಹಿತರು ಉದ್ಯೋಗವನ್ನರಸಿ ಬೆಂಗಳೂರಿಗೆ ಬಂದು ನಂತರ ಬೆಂಗಳೂರಿನ ಎರಡು ಪರಸ್ಪರ ವಿರುದ್ಧ ಮಾಫಿಯಾ ಗ್ಯಾಂಗ್ ಗಳಲ್ಲಿ ಸೇರುತ್ತಾರೆ. ನಂತರ ಈ ಇಬ್ಬರು ಪರಸ್ಫರ ಹೇಗೆ ಕಾದಾಟಕ್ಕೆ ನಿಲ್ಲುತ್ತಾರೆ ಮತ್ತು ಅದರ ಅಂತ್ಯವೇನು ಎಂಬದನ್ನು ಚಿತ್ರ ನಿರೂಪಿಸುತ್ತದೆ.