ಶಿವಾಜಿ ಸುರತ್ಕಲ್ 2 (2023)(U/A)
ಶಿವಾಜಿ ಸುರತ್ಕಲ್ 2 ಕಥೆ
ಶಿವಾಜಿ ಸುರತ್ಕಲ್ ಭಾಗ ಎರಡರಲ್ಲಿ ರಮೇಶ್ ಅರವಿಂದ್ ಮತ್ತು ರಾಧಿಕಾ ಚೇತನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಉಳಿದಂತೆ ಸಂಗೀತಾ ಶೃಂಗೇರಿ, ಮೇಘನಾ ಗಾಂವ್ಕರ್, ವಿನಾಯಕ್ ಜೋಶಿ, ರಘು ರಾಮನಕೊಪ್ಪ ಮುಂತಾದವರು ಸಿನಿಮಾದಲ್ಲಿದ್ದಾರೆ. ಆಕಾಶ್ ಶ್ರೀವತ್ಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ಬಂಡವಾಳ ಹೂಡಿದ್ದಾರೆ.
ರಿಲೀಸ್: ಶಿವಾಜಿ ಸುರತ್ಕಲ್ 2 ಏಪ್ರಿಲ್ 14ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ಕಥೆ: ಉಡುಪಿಯಲ್ಲಿ ನಡೆಯುವ ಒಂದು ಹತ್ಯೆಯಿಂದ ಶಿವಾಜಿ ಮಾಯಾವಿ ಕೇಸ್ನ ಹಿಂದೆ ಬೀಳ್ತಾನೆ. ಅಲ್ಲಿಂದ ಮುಂದೆ ಮತ್ತೆ 3 ಕೊಲೆಗಳು ನಡೆಯುತ್ತವೆ. ಪ್ರತಿ ಕೊಲೆಯನ್ನು ಹಂತಕ ಸುಳಿವು ಕೊಡುತ್ತಾ ಹೋಗುತ್ತಾನೆ, ಜೊತೆಗೆ ಶಿವಾಜಿ ಸುರತ್ಕಲ್ಗೆ ಸವಾಲಾಗುತ್ತಾ ಸಾಗುತ್ತಾನೆ. ಶಿವಾಜಿ ಕೊಲೆಗಾರನ ಸಮೀಪಕ್ಕೆ ಹೋಗುತ್ತಿದ್ದಂತೆ ಆತ ಚಾಣಾಕ್ಷತನದಿಂದ ತಪ್ಪಿಸಿಕೊಳ್ಳುತ್ತಾನೆ. ಆದರೆ ಈ ಕಳ್ಳ ಪೊಲೀಸ್ ಆಟದಲ್ಲಿ 5ನೇ ಕೊಲೆ ಆಗುವುದಕ್ಕು ಮುನ್ನ ಶಿವಾಜಿ ಹಂತಕನ ಮುಂದೆ ನಿಂತಿರುತ್ತಾನೆ.