ಪ್ರವೀಣ್ ಕೃಪಾಕರ್ ನಿರ್ದೇಶನದಲ್ಲಿ ಮೂಡಿಬಂದಿರುವ ತಲೆದಂಡ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅಶೋಕ್ ಕಶ್ಯಪ್ ಛಾಯಾಗ್ರಹಣ ಮತ್ತು ಬಿ.ಎಸ್.ಕೆಂಪರಾಜು ಸಂಕಲನವಿದೆ. ಇನ್ನುಳಿದಂತೆ ಮಂಗಳಾ ರಘು, ಬಿ.ಸುರೇಶ್, ಮಂಡ್ಯ ರಮೇಶ್, ರಮೇಶ್ ಪಂಡಿತ್ ಮತ್ತು ಚೈತ್ರಾ ಆಚಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಪರಿಸರ ರಕ್ಷಣೆಗಾಗಿ ಹೋರಾಡುವ ಬುದ್ದಿಮಾಂದ್ಯನ ಪಾತ್ರದಲ್ಲಿ ವಿಜಯ್ ನಟಿಸಿದ್ದಾರೆ. ಸೊಲ್ಲಿಗ ಸಮುದಾಯದ ಬುದ್ಧಿಮಾಂದ್ಯ ಕುನ್ನೇಗೌಡ ಗಿಡಮರಗಳೆಂದರೆ ಪ್ರಾಣ. ಅವುಗಳ ರಕ್ಷಣೆಗೆ ತನ್ನ ಮುಗ್ಧತೆಯಿಂದಲೇ ಹೋರಾಡುತ್ತಾನೆ.
ಈ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ಸಂಚಾರಿ ವಿಜಯ್ ಚಿತ್ರ ಬಿಡುಗಡೆ ಮುನ್ನವೇ ಬೈಕ್ ಅಪಘಾತದಲ್ಲಿ ಸಾವಿಗೀಡಾದರು.