ಗಿರೀಶ್ ಕಾಸರವಳ್ಳಿ ನಿರ್ದೇಶನದ ಈ ಚಿತ್ರದಲ್ಲಿ ಜಯಮಾಲಾ ಮುಖ್ಯ ಪಾತ್ರದಲ್ಲಿ ನಟಿಸುವದರೊಂದಿಗೆ ನಿರ್ಮಾಣ ಕೂಡ ಮಾಡಿದ್ದಾರೆ. ಚಿತ್ರದಲ್ಲಿ ಸುರೇಶ್ ಹುಬ್ಳಿಕರ್, ಶಿವರಾಮ್ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರಂಗನಾಥ್ ಶ್ಯಾಮ ರಾವ್ ರವರು ಬರೆದಿರುವ ಇದೇ ಹೆಸರಿನ ಕಾದಂಬರಿ ಮೇಲೆ ಚಿತ್ರದ ಕತೆ ರೂಪುಗೊಂಡಿದೆ.
ಅಪ್ಪಾ ಸಾಹೇಬ ಎಂಬ ಸ್ವಾತಂತ್ರ ಹೋರಾಟಗಾರ ಮತ್ತು ಅವನ ಎರಡನೇ ಹೆಂಡತಿ ನರ್ಮದಾ ತಾಯಿಯವರ ಜೀವನದ ಕತೆ ಚಿತ್ರ ಹೇಳುತ್ತದೆ. ಸ್ವಾತಂತ್ರ ಪೂರ್ವ ಕಾಲದಿಂದ ಹಿಡಿದು ನಂತರ ಬಂದ ಭೂ ಚಳುವಳಿವರೆಗೆ ಚಿತ್ರದ ಕತೆ ಸಾಗಿ ಬರುತ್ತದೆ.