ತುರ್ತು ನಿರ್ಗಮನ (2022)
ತುರ್ತು ನಿರ್ಗಮನ ಕಥೆ
ಹೇಮಂತ್ ಕುಮಾರ್ ನಿರ್ದೇಶನಲ್ಲಿ ಮೂಡಿ ಬಂದಿರುವ ತುರ್ತು ನಿರ್ಗಮನ ಚಿತ್ರದ ಮೂಲಕ ಸುನಿಲ್ ರಾವ್ ಹಲವು ವರ್ಷಗಳ ನಂತರ ಚಂದನವನಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ನಾಯಕಿಯಾಗಿ ಸಂಯುಕ್ತಾ ಹೆಗಡೆ ಕಾಣಿಸಿಕೊಂಡಿದ್ದರೆ, ರಾಜ್ ಬಿ ಶೆಟ್ಟಿ ಮತ್ತು ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. `ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಹೇಮಂತ್ ಕುಮಾರ್ ಎಲ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಲಿದ್ದಾರೆ. ಫ್ಯಾಂಟಸಿ ಜೆನ್ನರ್ ನ ಈ ಚಿತ್ರಕ್ಕೆ ಕುಮಾರ್ ಬಂಡವಾಳ ಹೂಡಿದ್ದರೆ, ಡಾಸ್ಮೋಡ್ ಅಲಿಯಾಸ್ ಧೀರೇಂಧ್ರ ದಾಸ್ ಸಂಗೀತ ನೀಡಿದ್ದಾರೆ.
ಕಥೆ
32 ವರ್ಷದ ವಿಕ್ರಮ್ ಸಾಯುತ್ತಾನೆ. ಆಸ್ಪತ್ರೆಯ ಶವಗಾರದಲ್ಲಿ ಕೆಲಸ ಮಾಡುವ ಇಬ್ಬರು ಟೈಮ್ ಮಷೀನ್ ಸಹಾಯದಿಂದ ಇವನನ್ನು ಮೂರು ದಿನಗಳ ಕಾಲ ಹಿಂದಕ್ಕೆ ಕಳಿಸುತ್ತಾರೆ. ಮೂರು ದಿನಗಳಲ್ಲಿ ತನ್ನ ಸಾವು ಖಚಿತ ಎಂದು ಮೊದಲೇ ತಿಳಿದು ಮರುಜೀವ ಪಡೆದ ವ್ಯಕ್ತಿ ಆ ಮೂರು ದಿನಗಳನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಮುಖ್ಯ ಕಥಾವಸ್ತು. ಫ್ಯಾಂಟಸಿಯೊಂದಿಗೆ ಮ್ಯಾಜಿಕಲ್ ಎಲಿಮೆಂಟ್ ಕೂಡ ಚಿತ್ರದಲ್ಲಿದೆ.
ರಿಲೀಸ್
ಈ ಚಿತ್ರ ಜೂನ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.