twitter
    For Quick Alerts
    ALLOW NOTIFICATIONS  
    For Daily Alerts

    ಗಾಯಕಿ ಪಲ್ಲವಿ ಅವರ ವಿಶೇಷ 'ಸ್ವರ ಸ್ಮರಣೆ'

    By Staff
    |

    Singer MD Pallavi
    ಸುಗಮ ಸಂಗೀತ ಲೋಕವನ್ನು ಅನಾವರಣಗೊಳಿಸುವ ವಿಶೇಷ ಕಾರ್ಯಕ್ರಮ 'ಸ್ವರ ಸ್ಮರಣೆ'. ಈ ಕಾರ್ಯಕ್ರಮಕ್ಕೆ ಗಾಯಕಿ ಎಂ.ಡಿ. ಪಲ್ಲವಿ ಸಾರಥ್ಯ ವಹಿಸಲಿದ್ದಾರೆ. ಜನವರಿ 28ರಂದು ಬೆಂಗಳೂರು ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.

    ಪಿ ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್, ರಾಜು ಅನಂತಸ್ವಾಮಿ, ಜಿ.ವಿ.ಅತ್ರಿ, ಪದ್ಮಚರಣ್, ಎಚ್.ಕೆ.ನಾರಾಯನ್ ಹಾಗೂ ವಸಂತ್ ಕನಕಾಪುರ್ ಅವರು ಸಂಯೋಜನೆ ಮಾಡಿದ ಗೀತೆಗಳನ್ನು ಪಲ್ಲವಿ ಅವರು ಪ್ರಸ್ತುತ ಪಡಿಸಲಿದ್ದಾರೆ. ಆಯಾ ಗೀತೆಗಳಿಗೆ ಯಾವ ವಾದ್ಯಗಳನ್ನು ಬಳಸಿ ಸ್ವರ ಸಂಯೋಜನೆ ಮಾಡಲಾಗಿದೆಯೊ ಅದೇ ವಾದ್ಯಗಳನ್ನು ಪಲ್ಲವಿ ಅವರು ಬಳಸಿಕೊಳ್ಳುತ್ತಿರುವುದು ಕಾರ್ಯಕ್ರಮದ ವಿಶೇಷ.

    ಸಿ.ಅಶ್ವಥ್ ಅವರ 'ದೇವ ವೀಣೆ' ಹಾಗೂ ಶಂಕರಾಚಾರ್ಯ ವಿರಚಿತ ಪ್ರವೀಣ್ ರಾವ್ ಸಂಗೀತ ನೀಡಿರುವ ಸಂಸ್ಕೃತ ಗೀತೆಗಳ 'ಕೈಲಾಸ್' ಧ್ವನಿಸುರುಳಿಗಳು ಬಿಡುಗಡೆಯಾಗಲಿವೆ.ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಅಂತರ್ಜಾಲ ತಾಣ ಅಥವಾ ಮೊಬೈಲ್ ಸಂಖ್ಯೆ 98444 73044, 90360 09704 ಸಂಪರ್ಕಿಸಬಹುದು.

    Wednesday, January 13, 2010, 12:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X