Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ಯದಾದ್ಯಂತ ಅಣ್ಣಾಬಾಂಡ್ಗೆ ಭರ್ಜರಿ ಸ್ವಾಗತ
ಪುನೀತ್ ರಾಜ್ ಕುಮಾರ್ ಅಭಿನಯದ ದುನಿಯಾ ಸೂರಿ ನಿರ್ದೇಶನದ 'ಅಣ್ಣಬಾಂಡ್' ಚಿತ್ರಕ್ಕೆ ರಾಜ್ಯದಾದ್ಯಂತ ಭರ್ಜರಿ ಸ್ವಾಗತ ಸಿಕ್ಕಿದೆ. ಶುಕ್ರವಾರ ಮಾತ್ರ ಚಿತ್ರ ಬಿಡುಗಡೆ ಎಂಬ ನಂಬಿಕೆಯನ್ನು ತೊಡೆದು ಮಂಗಳವಾರ ಬಿಡುಗಡೆಯಾದ 'ಅಣ್ಣಾಬಾಂಡ್'ಗೆ ಪ್ರೇಕ್ಷಕರು ಬೆನ್ನುತಟ್ಟಿದ್ದಾರೆ.
ದಾವಣೆಗೆರೆಯಲ್ಲಿ ಬೆಳಗ್ಗೆ 6 ಗಂಟೆಗೆ ಚಿತ್ರ ಪ್ರದರ್ಶನ ಆರಂಭವಾಗಿದೆ. ಕೆಲವು ಕಡೆ ನಾಲ್ಕಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಇನ್ನು ಬೆಂಗಳೂರಿನ ಮಲ್ಟಿಫೆಕ್ಸ್ಗಳಲ್ಲಿ ಬೆಳಗ್ಗೆ 7.30ಕ್ಕೆ ಬ್ರೇಕ್ ಫಾಸ್ಟ್ ಶೋ ಆರಂಭಸುವ ಮೂಲಕ ಕನ್ನಡ ಚಿತ್ರಗಳಿಗೂ ಮಾರ್ಕೆಟ್ ಇದೆ ಎಂಬುದು ಸಾಬೀತಾಗಿದೆ.
ಬೆಂಗಳೂರಿನಷ್ಟೇ ಅಲ್ಲದೆ ಕೊಪ್ಪಳದ ಶ್ರೀಲಕ್ಷ್ಮಿ ಮತ್ತು ಶ್ರೀ ಶಿವ ಚಿತ್ರಮಂದಿರಗಳಲ್ಲೂ 'ಅಣ್ಣಾಬಾಂಡ್' ಚಿತ್ರದ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಪುನೀತ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಕಾಣದಂತೆ ಮಾಯವಾದನು ಹಾಡಿಗೆ ಸೀಟುಗಳಲ್ಲೆ ಕೊಪ್ಪಳ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.
ಇನ್ನು ರಾಯಚೂರಿನ ಪೂರ್ಣಿಮಾ ಚಿತ್ರಮಂದಿರದಲ್ಲಿ 'ಅಣ್ಣಾಬಾಂಡ್' ಪೋಸ್ಟರ್ಗೆ 101 ತೆಂಗಿನಕಾಯಿಗಳನ್ನು ಒಡೆದು 18 ಲೀಟರ್ (ಪುನೀತ್ ಅವರ 18ನೇ ಚಿತ್ರವಾದ ಕಾರಣ) ಹಾಲಿನ ಅಭಿಷೇಕ ಮಾಡಿ ಶತದಿನೋತ್ಸವ ಆಚರಿಸಲಿ ಎಂದು ಹಾರೈಸಿದ್ದಾರೆ. ಈ ಕಾರ್ಯಕ್ರಮವನ್ನು ಕರವೇ ಜಿಲ್ಲಾ ಘಟಕ ಹಮ್ಮಿಕೊಂಡಿತ್ತು. (ಒನ್ಇಂಡಿಯಾ ಕನ್ನಡ)