ಅಮೃತ ಮಹೋತ್ಸವ ಪುಸ್ತಕಗಳು ಅನಾವರಣ

ಕನ್ನಡ ಚಿತ್ರರಂಗಕ್ಕ್ಕೆ ಅನಂತ ಅಭಿನಂದನೆಗಳನ್ನು ತಿಳಿಸಿದ ಅವರು ಡಾ.ರಾಜ್ ಕುಮಾರ್, ಎಚ್ ಎಲ್ ಎನ್ ಸಿಂಹ, ಹುಣಸೂರು ಕೃಷ್ಣಮೂರ್ತಿ ಮುಂತಾದ ಸಾಧಕರನ್ನು ಸ್ಮರಿಸಿದರು. ಖ್ಯಾತ ಸಾಹಿತಿ ಹಾಗೂ 75 ಪುಸ್ತಕಗಳ ಪ್ರಧಾನ ಸಂಪಾದಕ ಡಾ.ಬರಗೂರು ರಾಮಚಂದ್ರಪ್ಪ ಮಾತನಾಡುತ್ತಾ, ಪುಸ್ತಕಗಳು ಅನುಭವಗಳ ಆತ್ಮಾವಲೋಕನವೂ ಹೌದು ಸಿಂಹಾವನಲೋಕನವೂ ಹೌದು ಎಂದರು. ಪುಸ್ತಕಗಳನ್ನು ಹೊರತರುವಲ್ಲಿ ಸಹಕರಿಸಿದ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಹಾಗೂ ಲೇಖಕರನ್ನು ಸ್ಮರಿಸಿದರು.
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ 75 ಲೇಖಕರನ್ನು ಸನ್ಮಾನಿಸಿದರು. ಸಾಹಿತಿ ಡಾ.ಚಂದ್ರಶೇಖರ ಕಂಬಾರ, ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ಸುಧಾಕರರಾವ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ಚಿತ್ರವಾರ್ತೆ)
ಅಮೃತ ಪುಸ್ತಕ ಪಟ್ಟಿಯಲ್ಲಿ ಯಾರ್ಯಾರಿಗೆ ಸ್ಥಾನ?
ರಾಜ್ ಪುಣ್ಯಭೂಮಿಯಲ್ಲಿ ಅಮೃತ ಮಹೋತ್ಸವ
ಕನ್ನಡ,ತಮಿಳು ಸಂಬಂಧಕ್ಕೆ ಕಲ್ಲು ಹಾಕಬೇಡಿ:ಕಮಲ್
ಪೈರಸಿ ತಡೆಗೆ ಶೀಘ್ರ ಕಾನೂನು: ಯಡಿಯೂರಪ್ಪ
More from Filmibeat
ಕನ್ನಡ ಸಿನಿಮಾ kannada movies jayamala ಅಮೃತಮಹೋತ್ಸವ ಕೆಎಫ್ ಸಿಸಿ ಪುಸ್ತಕ ಬರಗೂರು ರಾಮಚಂದ್ರಪ್ಪ platinum jubilee of kannada cinema rameshwar thakur ರಾಮೇಶ್ವರ ಠಾಕೂರ್ ಡಾಜಯಮಾಲಾ amrutha mahotsava


Click it and Unblock the Notifications











