Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಜುನಾಥ ಏಳುತ್ತಿದ್ದಾನೆ ಬೆಡ್ ಕಾಫಿ ರೆಡಿ ಮಾಡಿ!
ಎಲ್ಲ ಸತ್ಯಗಳನ್ನು ಸುಳ್ಳು ಮಾಡುವ ಅಥವಾ ಎಲ್ಲ ಸುಳ್ಳುಗಳನ್ನು ಸತ್ಯಮಾಡುವ ಸುದ್ದಿ ಇದೀಗ ಗಾಂಧಿನಗರದಿಂದ ಅಲೆಅಲೆಯಾಗಿ ತೇಲಿ ಬರುತ್ತಿದೆ. ಹೌದು, ಎದ್ದೇಳು ಮಂಜುನಾಥ ಎದ್ದು ಬರುತ್ತಿದ್ದಾನಂತೆ. ಕನ್ನಡಪ್ರಭ ಮತ್ತು ಉದಯವಾಣಿ ಪತ್ರಿಕೆಗಳಲ್ಲಿ ಕಳೆದ ಶುಕ್ರವಾರ ಕಾಣಿಸಿಕೊಂಡ ಒಂದು ಜಾಹೀರಾತು ನೆನೆಪಿಸಿಕೊಳ್ಳುವುದಾದರೆ;
"17/07/09ನೇ ತಾರೀಖು ಎಲ್ಲಾ ಲೆಕ್ಕಾಚಾರಗಳಿಂದ ಸರಿ ಇದೆ ಅಂತ ಅಂದ್ಕೊಂಡಿದೀನಿ. ಅವತ್ತು ಎದ್ದೇಳೋದು ಗ್ಯಾರಂಟಿ". ವಿಶಾಲ ಕರ್ನಾಟಕದ ಹಂಚಿಕೆದಾರರು ಜಯಣ್ಣ ಫಿಲಂಸ್!
ನವರಸ ನಾಯಕ ಜಗ್ಗೇಶ್ ಅವರ ವೃತ್ತಿ ಜೀವನದ 25ನೇ ವರ್ಷಕ್ಕೆ ವಿಶೇಷ ಚಿತ್ರ ಎಂದು ಬಿಂಬಿತವಾಗಿರುವ ಎದ್ದೇಳು ಮಂಜುನಾಥ ಚಿತ್ರೀಕರಣ ಆರಂಭವಾಗಿ ಸರಿಸುಮಾರು ಒಂದೂವರೆ ವರ್ಷಗಳೇ ಕಳೆದಿದೆ. ಜತೆಗೆ, ಇತ್ತೀಚೆಗೆ ತೆರೆಕಂಡಿರುವ ಜಗ್ಗೇಶ್ ಅಭಿನಯದ ಹಲವಾರು ಚಿತ್ರಗಳು ಜನಪ್ರಿಯತೆ ಗಳಿಸುವಲ್ಲಿ ಅಥವಾ ನಿರ್ಮಾಪಕನ ಜೇಬು ತುಂಬುವಲ್ಲಿ ಅಸಮರ್ಥವಾಗಿವೆ. ಈ ಹಿನ್ನೆಲೆಯಲ್ಲಿ ಎದ್ದೇಳು ಚಿತ್ರ ಏನಾಗುವುದೋ ಆ ಮಂಜುನಾಥ ಸ್ವಾಮಿಗೇ ಗೊತ್ತು ಎಂದರೆ ಅಪಾರ ಭರವಸೆ ಇಟ್ಟುಕೊಂಡಿರುವ ಜಗ್ಗೇಶ್ ಮತ್ತು ಚಿತ್ರ ನಿಮ್ರಾಣ ತಂಡಕ್ಕೆ ಒಂದು ಕ್ಷಣ ಮೈ ಝುಂ ಎನ್ನಬಹುದು.
ಎದ್ದೇಳು ಮಂಜುನಾಥ ಚಿತ್ರದ ಕೆಲವು ದೃಶ್ಯಾವಳಿಗಳನ್ನು ಖುದ್ದು ಕಾಣಲು ಇಲ್ಲಿ ಕ್ಲಿಕ್ ಮಾಡಿ. ಅಂದಹಾಗೆ ಇದು ಮಠ ನಿರ್ದೇಶಕ ಗುರುಪ್ರಸಾದ್ ಅವರ ಎರಡನೇ ಚಿತ್ರ ಹಾಗೂ ಈ ವರ್ಷ ತೆರೆಕಾಣುತ್ತಿರುವ ರಿಮೇಕ್ ಚಿತ್ರಗಳ ಅಬ್ಬರದಲ್ಲಿ ಜಗ್ಗೇಶ್ ಅವರಿಗೋಸ್ಕರ ವಿ. ಸನತ್ ಕುಮಾರ್ ಮತ್ತು ಬಳಗದವರು ನಿರ್ಮಿಸಿರುವ ಚೊಚ್ಚಲ ಸ್ವಮೇಕ್ ಚಿತ್ರ.
(ದಟ್ಸ್ ಕನ್ನಡ ಸಿನಿವಾರ್ತೆ)