ಮದನ್ ಪಟೇಲ್ ನೆತ್ತಿ ಮೇಲೆ ಮಾನನಷ್ಟ ಮೊಕದ್ದಮೆ ಕತ್ತಿ

ಮದನ್ ಪಟೇಲ್ ಆರೋಪಗಳು ಬೇಸ್ಲೆಸ್, ಸುಳ್ಳು ಹಾಗೂ ದಾರಿತಪ್ಪಿಸುತಂತಿದೆ. ಮದನ್ ಪಟೇಲ್ ಅವರ ಅಗ್ಗದ ಹಾಗೂ ದುಡುಕು ನಿರ್ಧಾರ ಬಗ್ಗೆ ಬೇಸರಗೊಂಡಿದ್ದೇವೆ. 'ಸತ್ಯಾನಂದ' ಚಿತ್ರದ ಜಾಹೀರಾತು ಹಾಗೂ ಬಿಡುಗಡೆಗೆ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ.
'ಸತ್ಯಾನಂದ' ಚಿತ್ರದ ಎರಡು ಹಾಡುಗಳನ್ನು ಸೆನ್ಸಾರ್ ಮಾಡುವಂತೆ ಅರ್ಜಿ ಬಂದಿತ್ತು. ಕೋರ್ಟ್ ತಡೆಯಾಜ್ಞೆ ಇರುವ ಕಾರಣ ಅನುಮತಿ ಪತ್ರ ತರುವಂತೆ ತಿಳಿಸಿದೆವು. ಸೆನ್ಸಾರ್ ಮಂಡಳಿಯ ಕೇಂದ್ರ ಕಚೇರಿ ಕಾನೂನು ಸ್ಪಷ್ಟೀಕರಣ ಬಯಸುತ್ತದೆ. ಇದೆಲ್ಲಾ ಅಂಶಗಳು ಮದನ್ ಅವರಿಗೆ ಗೊತ್ತಿಲ್ಲದೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ ನಾಗರಾಜ್.
ಕಳೆದ ಎರಡು ವರ್ಷಗಳಿಂದ ಸೆನ್ಸಾರ್ ಮಂಡಳಿ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. 400ಕ್ಕೂ ಅಧಿಕ ಚಿತ್ರಗಳಿಗೆ ಸೆನ್ಸಾರ್ ಮಾಡಿ ಪ್ರಮಾಣ ಪತ್ರಗಳನ್ನು ನೀಡಿದ್ದೇನೆ. ನಮ್ಮ ಎಲ್ಲ ವ್ಯವಹಾರಗಳು ಪಾರದರ್ಶಕವಾಗಿವೆ. ಇರುವರೆಗೂ ಯಾರೊಬ್ಬರೂ ನಮ್ಮ ಮೇಲೆ ಈ ರೀತಿಯ ಆರೋಪ ಮಾಡಿಲ್ಲ ಎಂದಿದ್ದಾರೆ ನಾಗರಾಜ್.(ಏಜೆನ್ಸೀಸ್)
More from Filmibeat
English summary
The allegation made by Sri. Madan Patel is baseless, false and mischievous and appears to have been made with an intention of getting cheap publicity and threatening Censor Board and its’ officer. However, we will refuse to get dissuaded by such cheap and reckless act. I will initiate defamation suit against the Sri. Madan Patel.


Click it and Unblock the Notifications











