Don't Miss!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- News ಕರ್ನಾಟಕಕ್ಕೆ ವಸೂಲಿಗೆ ಬಂದಿದ್ದ ರಣದೀಪ್ ಸುರ್ಜೇವಾಲ: ಪ್ರಹ್ಲಾದ್ ಜೋಶಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆಲುಗಿನ 'ಶೌರ್ಯಂ' ಕನ್ನಡಕ್ಕೆ ರಿಮೇಕ್
ತೆಲುಗಿನ ಯಶಸ್ವಿ 'ಶೌರ್ಯಂ' ಚಿತ್ರದ ಕನ್ನಡ ಅವತರಿಣಿಕೆಯಲ್ಲಿ ದರ್ಶನ್ ತೂಗುದೀಪ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಸಾಧುಕೋಕಿಲ ನಿರ್ದೇಶಿಸಲಿದ್ದಾರೆ. ಚಿತ್ರಕ್ಕೆ ಶೌರ್ಯ, ಭದ್ರ ಅಂತ ಹೆಸರಿಡಲು ಚಿಂತಿಸಲಾಗಿದೆ.ಆದರೆ ಚಿತ್ರದ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ.
ತೆಲುಗು ನಟ ಗೋಪಿಚಂದ್ ಅಭಿನಯಿಸಿದ್ದ 'ಶೌರ್ಯಂ' ಚಿತ್ರ ಆಂಧ್ರಪ್ರದೇಶದಲ್ಲಿ ಜಯಭೇರಿ ಬಾರಿಸಿತ್ತು. ಆ ಚಿತ್ರದಲ್ಲಿದ್ದ ಸಿದ್ಧ ಸೂತ್ರಗಳನ್ನು ಗಮನಿಸಿದರೆ ದರ್ಶನ್ ಇಮೇಜ್ ಗೆ ಹೇಳಿ ಮಾಡಿಸಿದಂತ ಚಿತ್ರ. ಪ್ರಜ್ವಲ್ ದೇವರಾಜ್ ಅಭಿನಯಿಸಿದ್ದ 'ಗೆಳೆಯ ' ಚಿತ್ರ ಮಾಡಿ ಕೈ ಸುಟ್ಟುಕೊಂಡಿದ್ದ ಪಂಚ ಪಾಂಡವರಂತಿರುವ ಗೆಳೆಯರು ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ.
ಚಿತ್ರದಲ್ಲಿ ದರ್ಶನ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಲಿದ್ದಾರೆ. ತಂಗಿ ಸೆಂಟಿಮೆಂಟ್ ಸಹ ಚಿತ್ರದಲ್ಲಿ ಹೇರಳವಾಗಿದೆಯಂತೆ. ತಂಗಿ ಪಾತ್ರದ ಆಯ್ಕೆ ಪ್ರಕ್ರಿಯೆ ಸಹ ನಡೆಯುತ್ತಿದೆ. ಸದ್ಯಕ್ಕೆ ನಾಯಕಿ ಮತ್ತು ತಂಗಿ ಪಾತ್ರದ ಆಯ್ಕೆಯಲ್ಲಿ ಸಾಧು ಕೋಕಿಲ ತಲ್ಲೀನರಾಗಿದ್ದಾರೆ. ಚಿತ್ರಗಂಗಾಧರ್, ವೆಂಕಟೇಶ್, ಬಸವರಾಜ್ ಮತ್ತು ಇಬ್ಬರು ಗೆಳೆಯರು ಸೇರಿ ಈ ಚಿತ್ರ ನಿರ್ಮಿಸಲಿದ್ದಾರೆ. ಚಿತ್ರದ ಉಳಿದ ತಾರಾಗಣ ಇನ್ನೂ ಅಂತಿಮ ಗೊಂಡಿಲ್ಲ.
(ದಟ್ಸ್ ಕನ್ನಡ ಚಿತ್ರವಾರ್ತೆ)