'ಭೀಮಾ ತೀರದಲ್ಲಿ' ನಿರ್ಮಾಪಕ ಅಣಜಿಗೆ ಬೆದರಿಕೆ ಕರೆ

By Rajendra

Producer Anaji Nagaraj
ಇದೀಗ ತಾನೆ ಬಂದ ಮಾಹಿತಿ. ರಾಜ್ಯದಾದ್ಯಂತ ದುನಿಯಾ ವಿಜಯ್ ಅಭಿನಯದ 'ಭೀಮಾ ತೀರದಲ್ಲಿ' ಭರ್ಜರಿ ಪ್ರದರ್ಶನ ಕಾಣುತ್ತಿರುವ ಸಂದರ್ಭದಲ್ಲೇ ಚಿತ್ರದ ನಿರ್ಮಾಪಕ ಅಣಜಿ ನಾಗರಾಜ್ ಅವರಿಗೆ ಬೆದರಿಕೆ ಕರೆ ಬಂದಿದೆ. ಈ ಮೂಲಕ ಚಿತ್ರ ಮತ್ತೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಚಲನಚಿತ್ರ ನಿರ್ಮಾಪಕ ಅಣಜಿ ನಾಗರಾಜ್ ಅವರಿಗೆ ಶೇಷಪ್ಪನ ಪುತ್ರನ ಹೆಸರಿನಲ್ಲಿ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಣಜಿ ಇನ್ನೂ ಪೊಲೀಸ್ ದೂರು ನೀಡಿಲ್ಲ. ಕರೆ ಮಾಡಿರುವವರು ಅಣಜಿ ಬಳಿ 15 ರಿಂದ 20 ನಿಮಿಷ ಮಾತನಾಡಿದ್ದಾರೆ. ಚಿತ್ರದಲ್ಲಿ ಕೇಶವ ಎಂಬ ಹೆಸರನ್ನು ಬಳಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿನ ಕೇಶವ್ ಎಂಬ ಹೆಸರನ್ನು ಕೈಬಿಡುವಂತೆ ಕರೆ ಮಾಡಿರುವವರು ಬೆದರಿಕೆ ಹಾಕಿದ್ದಾಗಿ ಅಣಜಿ ತಿಳಿಸಿದ್ದಾರೆ. ಆ ಹೆಸರನ್ನು ಚಿತ್ರದಲ್ಲಿ ಬಳಸಿಕೊಳ್ಳುವ ಮುನ್ನ ತಮ್ಮನ್ನು ಸಂಪರ್ಕಿಸಬೇಕಾಗಿತ್ತು ಎಂದು ಕರೆಯಲ್ಲಿ ಹೇಳಿದ್ದಾಗಿ ಅಣಜಿ ತಿಳಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Bheema Theeradalli producer Anaji Nagaraj has received some threatening calls from an unknown person as a result to which she has decides to lodged a police complaint.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X