Don't Miss!
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Automobiles ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಜ ಜೀವನದಲ್ಲೂ ಹೀರೋ ಆದ ಜಗ್ಗೇಶ್
ರೈಲಿನ ಚಕ್ರದಡಿ ಸಿಲುಕಿ ಸಾವು - ಬದುಕಿನ ನಡುವೆ ಒದ್ದಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ ಚಿತ್ರನಟ ಮತ್ತು ವಿಧಾನ ಪರಿಷತ್ ಸದಸ್ಯ ಜಗ್ಗೇಶ್. ನವರಸನಾಯಕ ನಿಜ ಜೀವನದಲ್ಲೂ ಹೀರೋ ಎನಿಸಿಕೊಂಡಿದ್ದಾರೆ. ಮಂಗಳವಾರ (ಫೆ. 9) ರಾತ್ರಿ ನಗರದ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಶ್ರೀರಾಮಪುರದ ವಿಜಯ್ ಕುಮಾರ್ ಅನ್ನುವವರು ಈ ಅದೃಷ್ಟಶಾಲಿ.
ತನ್ನ ರಾಜಕೀಯ ಜೀವನದ ಗಾಡ್ ಫಾದರ್ ಎಂದೇ ಹೇಳುವ ಸಾರಿಗೆ ಸಚಿವ ಆರ್ ಅಶೋಕ್ ಅವರು ಬಳ್ಳಾರಿಗೆ ಪ್ರಯಾಣಿಸುತ್ತಿದ್ದರು. ಅವರನ್ನು ಬೀಳ್ಕೊಡಲು ಜಗ್ಗೇಶ್ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಸಚಿವರು ರೈಲಿನಲ್ಲಿ ಕೂರುತ್ತಿದ್ದಂತೆ ಜಗ್ಗೇಶ್ ಅವರಿಗೆ ಯಾರೋ ನೋವಿನಿಂದ ನರಳಾದುತ್ತಿರುವುದು ಕೇಳಿಸಿತು. ಕೂಡಲೇ ಟಾರ್ಚ್ ಹಿಡಿದು ಅಲ್ಲಿಗೆ ಧಾವಿಸಿದಾಗ ವ್ಯಕ್ತಿಯೊಬ್ಬ ನೋವಿನಿಂದ ನರಳಾದುತ್ತಿರುವುದು ಕೇಳಿಸಿತು. ತಕ್ಷಣ ತನ್ನ ಅಂಗರಕ್ಷಕರ ರಾಘವೇಂದ್ರ ಅವರನ್ನು ಇಳಿಸಿಚಕ್ರದಡಿಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಮೇಲಕ್ಕೆ ಎತ್ತಿದರು. ಆ ವೇಳೆಗೆ ವ್ಯಕ್ತಿಯ ಕಾಲುಗಳು ರೈಲು ಚಕ್ರಕ್ಕೆ ಸಿಲುಕಿ ತುಂಡಾಗಿತ್ತು.
ಜಸ್ಟ್ ಮಾತ್ ಮಾತಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಇಲ್ಲಿ
ಕೂಡಲೇ ಗಾಯಾಳುವನ್ನು ವಿಕ್ಟೋರಿಯ ಆಸ್ಪತ್ರೆಗೆ ಸಾಗಿಸಿದರು. ಆಸ್ಪತ್ರೆಯ ಅಧೀಕ್ಷ ತಿಲಕ್ ರನ್ನು ಜಗ್ಗೇಶ್ ಸಂಪರ್ಕಿಸಿ ಚಿಕಿತ್ಸೆಗೆ ಏರ್ಪಾಟು ಮಾಡಿದರು. ಬಳಿಕೆ ಪೊಲೀಸರು ವಿಚಾರಣೆ ನಡೆಸಿದಾಗ ವ್ಯಕ್ತಿ ಶ್ರೀರಾಮಪುರದ ನಿವಾಸಿ ಜಯಕುಮಾರ್ ಕೆಜಿಎಫ್ ಕಡೆ ಹೊರಟಿದ್ದ ಎಂಬ ವಿಚಾರ ತಿಳಿಯಿತು. ರೈಲು ಹತ್ತುವಾಗ ತಳ್ಳಾಟ ಉಂಟಾಗಿ ಕೆಳಗೆ ಬಿದ್ದಿದರು. ಆತನ ಚಿಕಿತ್ಸೆಗೆ ಸಚಿವ ಅಶೋಕ್ ಮತ್ತು ಜಗ್ಗೇಶ್ ಸ್ಥಳದಲ್ಲೇ ತಲಾ ಹತ್ತುಸಾವಿರ ನೀಡಿದರು.