Don't Miss!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- News India weather: ಮಳೆಗಾಗಿ ಕಾಯುತ್ತಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯೋಗರಾಜ್ ಭಟ್ಟರ ಚಿತ್ರಕ್ಕೆ ಸಿಕ್ಕ ಹೊಸ ನಿಧಿ
ಯೋಗರಾಜ್ ಭಟ್ ಸ್ವಂತ ನಿರ್ಮಾಣದ ಚಿತ್ರಕ್ಕೆ ಹೊಸ ನಿಧಿ ಸಿಕ್ಕಂತಾಗಿದೆ. ಇನ್ನೂ ಹೆಸರಿಡದ ಭಟ್ಟರ ಚಿತ್ರಕ್ಕೆ ನಾಯಕಿಯಾಗಿ ನಿಧಿ ಸುಬ್ಬಯ್ಯ ಆಯ್ಕೆ ಯಾಗಿದ್ದಾರೆ. ಈ ಮುಂಚೆ ಭಟ್ಟರು ತಮ್ಮ ಮಹತ್ವಾಕಾಂಕ್ಷಿ ಚಿತ್ರಕ್ಕೆ ಹರಿಪ್ರಿಯಾರನ್ನು ಆಯ್ಕೆ ಮಾಡಿಕೊಂಡಿದ್ದರು. ಚಿತ್ರಕತೆಯನ್ನು ಭಟ್ಟರು ತಿದ್ದುಪಡಿ ಮಾಡಿಕೊಂಡಿದ್ದು ಬದಲಾದ ಚಿತ್ರಕತೆಗೆ ತಕ್ಕಂತೆ ನಾಯಕಿಯನ್ನು ಭಟ್ಟರು ಬದಲಾಯಿಸಿದ್ದಾರೆ.
ಹೊಸ ಚಿತ್ರಕತೆಗೆ ಹರಿಪ್ರಿಯಾ ಹೊಂದುವುದಿಲ್ಲ. ಹಾಗಾಗಿ ನಿಧಿ ಸುಬ್ಬಯ್ಯ ಅವರನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂಬುದು ಭಟ್ಟರು ಕೊಡುವ ವಿವರಣೆ.'ವರ' ಎಂಬ ಚಿತ್ರದ ಮೂಲಕ ನಿಧಿ ಸುಬ್ಬಯ್ಯ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಕಳೆದ ವರ್ಷ ಕೋಮಲ್ ಜತೆ 'ಚಂಕಾಯ್ಸಿ ಚಿಂದಿ ಉಡಾಯ್ಸಿ'ದ್ದರು. ಬಿಡುಗಡೆಗಾಗಿ ಕಾಯುತ್ತಿರುವ 'ಕೃಷ್ಣ ನೀ ಲೇಟಾಗಿ ಬಾರೋ' ಚಿತ್ರದಲ್ಲೂ ನಿಧಿ ಪಾತ್ರನಿರ್ವಹಣೆ ಮಾಡಿದ್ದಾರೆ.
ನಿಧಿ ಸುಬ್ಬಯ್ಯ ಅವರಿಗೆ ಜತೆಯಾಗಲಿರುವುದು ಗುಳಿಕೆನ್ನೆಯ ಹುಡುಗ ದಿಗಂತ್. ಚಿತ್ರದ ಶೀರ್ಷಿಕೆಯ ಹುಡುಕಾಟದಲ್ಲಿ ಸದ್ಯಕ್ಕೆ ಭಟ್ಟರು ಮುಳುಗಿದ್ದಾರೆ. ಯೋಗರಾಜ್ ಭಟ್, ದಿಗಂತ್ ಜೋಡಿ ಈಗಾಗಲೇ ಮೂರು ಚಿತ್ರಗಳೊಂದಿಗೆ ಕೆಲಸ ಮಾಡಿದ್ದಾರೆ. ಈ ಹಿಂದೆ ಇವರಿಬ್ಬರೂ 'ಮುಂಗಾರು ಮಳೆ', 'ಗಾಳಿಪಟ' ಮತ್ತು 'ಮನಸಾರೆ' ಚಿತ್ರಗಳನ್ನು ಮಾಡಿದ್ದರು.