ಕಪಾಲಿಗೆ ಕವಿದ ಗ್ರಹಣ ಬಿಡುವುದು ಯಾವಾಗ?
*ಜಯಂತಿ

ಚಿತ್ರಮಂದಿರದ ಎದುರಲ್ಲೇ ಒಂದು ತೆಂಗಿನಮರವಿದೆ. ಆ ಕಾರಣಕ್ಕೇ ಸಿನಿಮಾಗಳಿಗೆ ಲತ್ತೆ ಹೊಡೆಯುತ್ತಿದೆ ಅಂತ ಕೆಲವು ಜ್ಯೋತಿಷಿಗಳು ಹೇಳಿದ್ದಾರಂತೆ. ಚಿತ್ರಮಂದಿರದಲ್ಲಿ ಪಾರ್ಕಿಂಗ್ ಶುಲ್ಕ ವಸೂಲು ಮಾಡುವವರು ಈ ವಿಷಯ ಮಾತಾಡುತ್ತಾ, ತಮಾಷೆ ಮಾಡುವುದುಂಟು.
ಕಪಾಲಿಯಲ್ಲಿ ತೆರೆಕಂಡ 'ಗುಲಾಮ' ಎರಡನೇ ವಾರಕ್ಕೇ ಬಾಡಿಗೆ ಹುಟ್ಟಿಸಿಕೊಳ್ಳಲು ಹೆಣಗಾಡಿತ್ತು. ಆಮೇಲೆ ವಿಧಿಯಿಲ್ಲದೆ ಪುನೀತ್ ರಾಜ್ಕುಮಾರ್ ಅಭಿನಯದ 'ಬಿಂದಾಸ್' ಚಿತ್ರವನ್ನು ಹಾಕಲಾಯಿತು. ಈಗ 'ಮೇಘವೇ ಮೇಘವೇ' ಮಕಾಡೆಯಾಗಿದೆ. ಎರಡನೇ ದಿನದಿಂದಲೇ ಬಾಡಿಗೆ ಹುಟ್ಟಿಸಿಕೊಳ್ಳಲು ಈ ಸಿನಿಮಾ ಹೆಣಗಾಡಿದೆ. ಮೂರು ದಿನಗಳ ಮಟ್ಟಿಗೆ 'ಮಿಲನ' ಸಿನಿಮಾ ಅಲ್ಲಿ ಓಡುತ್ತಿದೆ.
ಕೆಲವು ತಿಂಗಳ ಹಿಂದೆ 'ಓಂ' ಚಿತ್ರ ಹಾಕುವ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿತ್ತು. ಪ್ರಮುಖ ಚಿತ್ರಗಳ ನಿರ್ಮಾಪಕರು ಆದಷ್ಟು ಆ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಮಾಡದೇ ಇರಲು ಯೋಚಿಸುತ್ತಿರುವ ಸುದ್ದಿಯಿದೆ. ಅದು ಲಭ್ಯ ಇರುವಾಗಲೂ ಗಣೇಶ, ದರ್ಶನ್, ಪುನೀತ್ ಮೊದಲಾದ ಸ್ಟಾರ್ಗಳ ಸಿನಿಮಾಗಳು ತೆರೆಕಾಣದೇ ಇರುವುದು ಇದಕ್ಕೆ ಸಣ್ಣ ಉದಾಹರಣೆ ಅಷ್ಟೆ. ಒಂದು ಕಾಲದಲ್ಲಿ ಪ್ರತಿಷ್ಠಿತ ಚಿತ್ರಮಂದಿರ ಎನ್ನಿಸಿಕೊಂಡಿದ್ದ ಕಪಾಲಿಗೆ ಕವಿದಿರುವ ಈ ಗ್ರಹಣ ಬಿಡುವುದು ಯಾವಾಗಲೋ?


Click it and Unblock the Notifications











