ಬೆಳ್ಳಿಹೆಜ್ಜೆಯಲ್ಲಿ ಬಬ್ರುವಾಹನ ಖ್ಯಾತಿಯ ಕೆಸಿಎನ್ ಗೌಡ

ಕೆಸಿಎನ್ ಗೌಡ ಅವರು ಕನ್ನಡ ಚಿತ್ರೋದ್ಯಮದೊಂದಿಗಿನ ತಮ್ಮ ಅನುಭವಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳಲಿದ್ದಾರೆ. ಒಂದು ಗಂಟೆ ಕಾಲ ಕೆಸಿಎನ್ ಗೌಡ ಅವರೊಂದಿಗೆ ಹರಟಬಹುದು. ವೃತ್ತಿಯಿಂದ ರೇಷ್ಮೆ ವ್ಯಾಪಾರಿಗಳಾದ ಕೆಸಿಎನ್ ಅವರದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ದಬಳ್ಳಾಪುರ ತಾಲೂಕು.
ಅವರು ನಿರ್ಮಿಸಿದ ಚಿತ್ರಗಳಲ್ಲಿ ಬಬ್ರುವಾಹನ, ಹುಲಿಯ ಹಾಲಿನ ಮೇವು, ಸತ್ಯ ಹರಿಶ್ಚಂದ್ರ ಮುಖ್ಯವಾದವು. ಬೆಂಗಳೂರಿನ ನವರಂಗ್ ಹಾಗೂ ಊರ್ವಶಿ ಚಿತ್ರಮಂದಿರಗಳ ಮಾಲೀಕರು ಕೂಡ. ಕೆಸಿಎನ್ ಗೌಡ ಅವರ ಮಕ್ಕಳಾದ ಕೆಸಿಎನ್ ಚಂದ್ರಶೇಖರ್ ಹಾಗೂ ಕೆಸಿಎನ್ ಮೋಹನ್ ಸಹ ಚಿತ್ರನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.
ಕೆಸಿಎನ್ ಗೌಡ ಬೆಳ್ಳಿಹೆಜ್ಜೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಬಬ್ರುವಾಹನ ಸತ್ಯಹರಿಶ್ಚಂದ್ರ ಹುಲಿಯ ಹಾಲಿನ ಮೇವು kcn gowda belli hejje karnataka chalanachitra academy babruvahana navarang


Click it and Unblock the Notifications