Don't Miss!
- News ಕನಕಪುರಕ್ಕೆ ಕಾಲಿಡಲು ಭಯ; ಕೋರ್ಟ್ಗೆ ಯತ್ನಾಳ್ ಹೇಳಿಕೆ!
- Finance ತನ್ನ 4 ವರ್ಷದ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಇನ್ಫೋಸಿಸ್ ಷೇರುಗಳನ್ನು ಉಡುಗೊರೆಯಾಗಿ ನೀಡಿದ ನಾರಾಯಣ ಮೂರ್ತಿ
- Technology ಇಂದು ಮಾರುಕಟ್ಟೆಗೆ ಬರಲಿದೆ ಗೆಸ್ಚರ್ ಮೂಲಕ ಕೆಲಸ ಮಾಡುವ ಸ್ಮಾರ್ಟ್ಫೋನ್!
- Automobiles Tata Nexon: ಮುಂಬರಲಿರುವ ಟಾಟಾ ನೆಕ್ಸಾನ್ ಸಿಎನ್ಜಿ ಕಾರಿನ ವಿಶೇಷತೆಗಳಿವು.. ಹೆಚ್ಚು ಮೈಲೇಜ್!
- Sports IPL 2024: ಐಪಿಎಲ್ ಆರಂಭಕ್ಕೂ ಮುನ್ನವೇ 'ಸೂಪರ್' ಭವಿಷ್ಯ; ಆರ್ಸಿಬಿ ಈ ಬಾರಿ ಕಪ್ ಗೆಲ್ಲುತ್ತದಾ? ಇಲ್ಲಿದೆ ಉತ್ತರ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೀತಿಯಲ್ಲಿ ಅತ್ಯಂತ ಮಹತ್ವವಾದ್ದು ತಾಯಿಯ ಪ್ರೀತಿ,
ಗೊತ್ತು ಗುರಿ ಎಂಬುದೇ ತಮಗಿಲ್ಲ ಎಂದೂ, ಈವರೆಗೆ ಏನೆಲ್ಲಾ ಆಗಿದೆಯೋ ಅದೆಲ್ಲಾ ತಮ್ಮ ಪುರೋಭಿವೃದ್ಧಿಯ ಮುಂದಿನ ಮೆಟ್ಟಿಲು... ಇತ್ಯಾದಿ...ಇತ್ಯಾದಿ.... ಫಿಲಾಸಫಿಯ ಮಾತನಾಡಿದ ಉಪ್ಪಿ ಈಗ 100 ಪರ್ಸೆಂಟ್ ತತ್ವಜ್ಞಾನಿ ಆಗಿಹೋಗಿದ್ದಾರೆ.
ಅವರು ಇತ್ತೀಚೆಗೆ ಆಡುತ್ತಿರುವ ಮಾತುಗಳು, ಉಪ್ಪಿ ತತ್ವಜ್ಞಾನದ ಹಾದಿ ತುಳಿಯುತ್ತಿದ್ದಾರೆ ಎಂಬುದಕ್ಕೆ ಸಾಕಷ್ಟು ಪುರಾವೆ ಒದಗಿಸುತ್ತದೆ. ಪ್ರಿತ್ಸೇ...ಪ್ರಿತ್ಸೇ...ಪ್ರಿತ್ಸೇ.... ಕಣ್ಣು ಮುಚ್ಚಿ ಪ್ರಿತ್ಸೆ.... ಪ್ರೇಮಿಗಾಗಿ ಪ್ರಿತ್ಸೇ.... ನನಗಾಗಿ ಪ್ರೀತ್ಸೆ..... ಮನಸು ಬಿಚ್ಚಿ ಪ್ರೀತ್ಸೆ.... ಕಿರಣಾ ಕಿರಣಾ...ನನ್ನ ಬಾಳ ಕಿರಣಾ..... ಎಂದು ಕೇಳುಗರ ಕರ್ಣ ಕಿತ್ತು ಹೋಗುವಂತೆ ಅರುಚಿದ ಉಪ್ಪಿ ಈಗ ಪ್ರೀತಿಯ ನಿಜವಾದ ಅರ್ಥ ಅರಿತಿದ್ದಾರೆ.
ಪ್ರೀತಿಯಲ್ಲಿ ಅತ್ಯಂತ ಮಹತ್ವವಾದ್ದು ತಾಯಿಯ ಪ್ರೀತಿ, ಆದರೆ ತಾಯಿ ತನ್ನ ಮಗನನ್ನು ಮಾತ್ರ ಪ್ರೀತಿಸುತ್ತಾಳೆ. ಆದರೆ ಮನುಷ್ಯ ಮನುಷ್ಯನ ಪ್ರೀತಿಸುತ್ತಾನೆ. ಆ ಪ್ರೀತಿಯ ಮುಂದೆ ಮತ್ತಾವ ಪ್ರೀತಿಯೂ ಬೇಡ.... ಎಂಬಿತ್ಯಾದಿ ಸ್ಟೇಟ್ಮೆಂಟ್ ಕೊಡುತ್ತಿದ್ದಾರೆ.
ನನಗಾಗಿ ಪ್ರೀತ್ಸೆ... ನಿನಗಾಗಿ ಪ್ರೀತ್ಸೆ ಎಂದೆಲ್ಲ ಹೇಳಿದ ಉಪ್ಪಿಗೆ ಮನುಷ್ಯ ಮನುಷ್ಯರ ಪ್ರೀತಿ...ತಾಯಿಪ್ರೀತಿಗಿಂತಲೂ ಮಿಗಿಲಾಗಿ ಕಂಡಿದೆ. ತಾಯಿ ಪ್ರೀತಿಯ ಮಹತ್ವದ ಅರಿವೂ ಮೂಡಿದೆ. ಉಪೇಂದ್ರ ಚಿತ್ರದಲ್ಲಿ ಕಾವಿ ತೊಟ್ಟಿದ್ದ ಉಪ್ಪಿ ನಿಜವಾಗಿಯೂ ಕಾವಿ ಧರಿಸಿ, ಕಮಂಡಲ ಹಿಡಿದು ವಾನಪ್ರಸ್ಥಾಶ್ರಮಕ್ಕೆ ಹೋಗುವ ಕಾಲ ದೂರವೇನಿಲ್ಲ ಎನ್ನಿಸುತ್ತದೆ. ನಿಮಗೇನಾದರೂ ಈ ಬಗ್ಗೆ ವಿವರ ಸಿಕ್ಕರೆ ನಮಗೆ ತಿಳಿಸುತ್ತೀರಿ ತಾನೆ?