Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಡಿಮಗ ಅಸಭ್ಯ ದೃಶ್ಯಗಳ ಬಗ್ಗೆ ಶಿವಣ್ಣ ಪಶ್ಚಾತ್ತಾಪ
'ಮುಖದ ಮೇಲೆ ಮೂತ್ರ ಮಾಡುವ ದೃಶ್ಯ' ಮತ್ತು ತಂಗಿಯ 'ಚಿತಾ ಭಸ್ಮ'ವನ್ನು ಕುಡಿಯುವ ಎರಡು ದೃಶ್ಯಗಳನ್ನು ಪ್ರೇಕ್ಷಕರು ಇನ್ನೂ ಅರಗಿಸಿಕೊಂಡಿಲ್ಲ. ಆ ರೀತಿಯ ಕೆಟ್ಟ ದೃಶ್ಯಗಳಲ್ಲಿ ತಾನು ನಟಿಸಬಾರದಿತ್ತು ಎಂಬುದು ಶಿವಣ್ಣನ ವಿವರಣೆ. ಅಣ್ಣ ತಂಗಿಯರ ಅನುಬಂಧದ ಪರಮಾವಧಿಯನ್ನು ತೋರಿಸಲು ಹೀಗೆ ಮಾಡಬೇಕಾಯಿತು. ಆದರೆ ನಂತರ ತಮಗೆ ಈ ರೀತಿಯ ದೃಶ್ಯದ ಅವಶ್ಯಕತೆ ಇರಲಿಲ್ಲ ಎಂಬುದು ಮನದಟ್ಟಾಯಿತು ಎಂದು ಶಿವಣ್ಣ ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ತಪ್ಪನ್ನು ಅಂಗೀಕರಿಸಿದ್ದಾರೆ.
ಚಿತ್ರದಲ್ಲಿ ನಕಲಿ ಪೊಲೀಸ್ ಒಬ್ಬ ಮುಖದ ಮೇಲೆ ಮೂತ್ರ ಮಾಡುವ ದೃಶ್ಯದ ಬಗೆಗೂ ತಮಗೆ ಅಸಮಾಧಾನವಿತ್ತು. ಕಮಲ ಹಾಸನ್ ತಮಿಳಿನಲ್ಲಿ ನಟಿಸಿರುವ 'ಮಹಾನದಿ' ಚಿತ್ರದ ಸ್ಪೂರ್ತಿಯಿಂದ ಆ ದೃಶ್ಯವನ್ನು ಬಳಸಿಕೊಂಡಿದ್ದೇವೆ. ಆದರೆ ಆ ದೃಶ್ಯ ನನ್ನ ಚಿತ್ರಕ್ಕೆ ಅಷ್ಟಾಗಿ ಹೊಂದಾಣಿಕೆಯಾಗಿಲ್ಲ. ಚಿತ್ರದಲ್ಲಿ ಇದೊಂದು ಅಸಂಬದ್ಧ ದೃಶ್ಯವಾಗಿತ್ತು. ಆ ರೀತಿಯ ದೃಶ್ಯಗಳಲ್ಲಿ ನಟಿಸಿದ್ದಕ್ಕೆ ದಯವಿಟ್ಟು ನನ್ನನ್ನು ಕ್ಷಮಿಸಿ. ಮುಂದಿನ ನನ್ನ ಚಿತ್ರಗಳಲ್ಲಿ ವಿಭಿನ್ನ ಶಿವರಾಜ್ ಕುಮಾರ್ ಆಗಿ ಕಾಣಿಸುತ್ತೇನೆ ಎಂದು ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಪ್ರಸ್ತುತ ನಟಿಸುತ್ತಿರುವ ಭಾಗ್ಯದ ಬಳೆಗಾರ ಸೇರಿದಂತೆ ಮುಂದಿನ ನನ್ನ ಚಿತ್ರಗಳು ವೈವಿಧ್ಯಮಯವಾಗಿರುತ್ತವೆ. ಚಿತ್ರಗಳ ಆಯ್ಕೆಯಲ್ಲೂ ವೈವಿಧ್ಯತೆ ಇರುತ್ತದೆ. ಅದಕ್ಕೆ ಪೂರಕವಾಗಿ 'ದೇವರು ಕೊಟ್ಟ ತಂಗಿ' ಚಿತ್ರ ಸೆಟ್ಟೇರಿದೆ ಎಂದರು. ಏತನ್ಮಧ್ಯೆ ಅಗ್ನಿ ಶ್ರೀಧರ್ ಅವರು ಶಿವರಾಜ್ ಕುಮಾರ್ ಅವರಿಗೆ ಚಿತ್ರಕತೆಯೊಂದರ ಎಳೆಯನ್ನು ಹೇಳಿದ್ದಾರೆ. ಕತೆ ತುಂಬ ಇಷ್ಟವಾಯಿತು.ಅಗ್ನಿ ಶ್ರೀಧರ್ ಅವರ ಚಿತ್ರದಲ್ಲಿ ನಟಿಸುವುದಾಗಿ ಶಿವಣ್ಣ ತಿಳಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಸೆನ್ಸಾರ್
ಮಂಡಳಿಗೆ
ಚಳ್ಳೆಹಣ್ಣು
ತಿನ್ನಿಸಿದ
ಹೊಡಿಮಗ
ಚಿತ್ರವಿಮರ್ಶೆ
:
ರುಂಡಗಳ
ಚೆಂಡಾಟದಲ್ಲಿ
ಹ್ಯಾಟ್ರಿಕ್
ಹೊಡೆದ
ಮಗ!
ಸೆನ್ಸಾರ್
ಮಂಡಳಿಯೊಂದಿಗೆ
'ಹೊಡಿಮಗ'
ಗುದ್ದಾಟ