Don't Miss!
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಂದಿಬೆಟ್ಟದಲ್ಲಿ ಧೂದ್ ಪೇಡ ದಿಗಂತ್ ಪುತ್ರ ಗೀತೆ
ಧೂದ್ ಪೇಡ ದಿಗಂತ್ ಮತ್ತು ರೂಪಶ್ರೀ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಪುತ್ರ. ಇತ್ತೀಚೆಗೆ ಈ ಚಿತ್ರದ ಹಾಡೊಂದನ್ನು ನಂದಿಬೆಟ್ಟದಲ್ಲಿ ಚಿತ್ರೀಕರಿಸಲಾಯಿತು. ರಾಂನಾರಾಯಣ್ ರಚನೆಯ 'ಕಾಲೇಜು ಜನರೇಶನ್ ಯಾರ ಮಾತು ಕೇಳಲ್ಲಾ ಹಾರ್ಟ್ನಲ್ಲಿ ವೈಬ್ರೇಶನ್ ಎಂದಿಗೂ ಮುಗಿಯಲ್ಲಾ ಎಂಬ ಹಾಡಿಗೆ ರಾಜಾ ನೃತ್ಯ ನಿರ್ದೇಶನದಲ್ಲಿ ದಿಗಂತ್ ಹಾಗೂ ರೂಪಶ್ರೀ ಹೆಜ್ಜೆ ಹಾಕಿದರು.
ಈ ಗೀತೆಯ ಚಿತ್ರೀಕರಣದೊಂದಿಗೆ 'ಪುತ್ರ' ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ ಎಂದು ನಿರ್ದೇಶಕ ಉಮಾಕಾಂತ್ ತಿಳಿಸಿದ್ದಾರೆ. ರೋಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಂಥೋಣಿಪಾಲ್ ಆವರು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಟಿ.ಸತ್ಯನಾರಾಯಣರ ಸಹ ನಿರ್ಮಾಣವಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಮೈಸೂರು, ಮೇಲುಕೋಟೆ, ನಂದಿಬೆಟ್ಟ ಹಾಗೂ ಚಿಕ್ಕಮಗಳೂರಿನಲ್ಲಿ ಒಟ್ಟು ನಲವತ್ತೈದು ದಿನಗಳ ಕಾಲ ನಡೆದಿದೆ. ಸದ್ಯದಲ್ಲೆ ಮಾತಿನ ಜೋಡಣೆ ಆರಂಭವಾಗಲಿದೆ.
ಆರು ಹಾಡುಗಳಿರುವ ಈ ಚಿತ್ರಕ್ಕೆ ರಮೇಶ್ರಾಜಾ ಸಂಗೀತ ನೀಡಿದ್ದಾರೆ. ರವಿಸುವರ್ಣ ಛಾಯಾಗ್ರಹಣ, ಬಾಬುಖಾನ್ ಕಲಾನಿರ್ದೇಶನ, ಚಂದ್ರಮಯೂರ್ ಹಾಗೂ ರಾಜಾ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ಹಾಗೂ ರಾಮಣ್ಣನವರ ನಿರ್ಮಾಣ ನಿರ್ವಹಣೆಯಿದೆ. ದಿಗಂತ್, ಸುಪ್ರೀತಾ, ರೂಪಶ್ರೀ, ಅವಿನಾಶ್, ಟೆನ್ನಿಸ್ಕೃಷ್ಣ, ಸುಧಾಬೆಳವಾಡಿ, ಸುಂದರರಾಜ್ ತಾರಾಬಳಗ ಚಿತ್ರಕ್ಕಿದೆ.