ಅಚ್ಚ ಹೊಸ ಕಾಪಿಯೊಂದಿಗೆ ಕರಿಯ ಮತ್ತೆ ತೆರೆಗೆ

ಐದು ವರ್ಷಗಳ ಹಿಂದೆ ಈ ಚಿತ್ರ ಕಪಾಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು.ಆಗ ನಸೀಬು ನೆಟ್ಟ್ಟಗಿಲ್ಲದ ಕಾರಣ ಚಿತ್ರ ಓಡಿದ್ದು ಅಷ್ಟಕ್ಕಷ್ಟೆ.ಕರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ಚಿತ್ರದ ವಿತರಣೆ ಹಕ್ಕುಗಳನ್ನು ಇಕ್ಬಾಲ್ ಫಿಲಂಸ್ ಗೆ ಮಾರಾಟ ಮಾಡಿ ಕೈತೊಳೆದುಕೊಂಡಿದ್ದರು.
ಕರಿಯ ಚಿತ್ರ ಇಕ್ಬಾಲ್ ಕೈಸೇರಿದ್ದೇ ತಡ ಮ್ಯಾಜಿಕ್ ಸಂಭವಿಸಿ ಬಿಟ್ಟಿತು. ಎರಡನೆ ಬಾರಿಗೆ ಕರಿಯನನ್ನು ಇಕ್ಬಾಲ್ ಬಿಡುಗಡೆ ಮಾಡಿದಾಗ ಆ ಚಿತ್ರ ಶತದಿನ ಸಂಭ್ರಮ ಆಚರಿಸಿಕೊಂಡಿತು. ನಿರ್ಮಾಪಕ ಬಾಲ್ ರಾಜ್ ಗಿಂತಲೂ ವಿತರಕ ಇಕ್ಬಾಲ್ ಗೆ ಭರ್ಜರಿ ಲಾಭ ತಂದುಕೊಟ್ಟಿತು.
ಈಗ ಮತ್ತೆ ಕಪಾಲಿ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ಒಟ್ಟು 20 ಚಿತ್ರಮಂದಿರಗಳಲ್ಲಿ 'ಕರಿಯ' ಅಚ್ಚ ಹೊಸ ಕಾಪಿಯೊಂದಿಗೆ ಬಿಡುಗಡೆಯಾಗುತ್ತಿದೆ. ಹೊಸ ಪ್ರಿಂಟ್ ಗಾಗಿ ಇಕ್ಬಾಲ್ ರು.40 ಲಕ್ಷ ಖರ್ಚು ಮಾಡಿದ್ದಾರಂತೆ. ದರ್ಶನ್ ಹುಟ್ಟುಹಬ್ಬದ ತಿಂಗಳಲ್ಲಿ ಕರಿಯ ಮತ್ತೊಮ್ಮೆ ಬಿಡುಗಡೆಯಾಗುತ್ತಿರುವುದರಿಂದ ಅವರ ಅಭಿಮಾನಿಗಳ ಖುಷಿ ಮುಗಿಲು ಮುಟ್ಟಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ದರ್ಶನ್ ಹುಟ್ಟುಹಬ್ಬದ ಸವಿಸವಿ ನೆನಪುಗಳು
ಬಾಸ್ ದರ್ಶನ್ ಗೆ ಹುಟ್ಟುಹಬ್ಬದ ಶುಭಾಶಯಗಳು!
ಕಪಾಲಿಗೆ ಕವಿದ ಗ್ರಹಣ ಬಿಡುವುದು ಯಾವಾಗ?


Click it and Unblock the Notifications











