Don't Miss!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- News ಗೃಹ ಸಚಿವ ಡಾ. ಜಿ ಪರಮೇಶ್ವರ್ ರಾಜೀನಾಮೆಗೆ ಆಗ್ರಹ: ಕಾರಣವೇನು?
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಟಾರ್ ಗಳ ಜೋಡಿಯಾದ ಮಲೆನಾಡ ಮಲ್ಲಿಗೆ ದೀಪಾ
ಸಾಮಾನ್ಯವಾಗಿ ಎಷ್ಟೇ ಸುರಸುಂದರಿಯರಾಗಿದ್ದರೂ ದೊಡ್ಡ ಸ್ಟಾರ್ಗೆ ಮೊದಲ ಬಾರಿಯೇ ನಾಯಕಿಯೋಗೋದು ತೀರಾ ಕಡಿಮೆ ಅಂತಹದ್ದರಲ್ಲಿ ದರ್ಶನ್ ಅಭಿನಯದ ಸಾರಥಿ ಚಿತ್ರದ ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ ಮಲೆನಾಡ ಮಲ್ಲಿಗೆಯಂತಹ ಮಲೆನಾಡಿನ ಹುಡುಗಿ ದೀಪಾ ಸನ್ನಿಧಿ ಈಗ ಮತ್ತೊಂದು ಬಂಪರ್ ಲಾಟರಿ ಹೊಡೆದಂತಾಗಿದೆ ಯಾಕಂದ್ರೆ ಸ್ಯಾಂಡಲ್ವುಡ್ನಲ್ಲಿ ಉತ್ತಮ ನಟನಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ದರ್ಶನ್ ಜೋಡಿಯಾಗಿ ನಟಿಸಿರುವ ಸಾರಥಿ ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರದಿಂದ ಮುಂದೂಡಲ್ಪಟ್ಟಿದೆ. ಈಗ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಚಿತ್ರಕ್ಕಾಗಿ ಪ್ರೇಕ್ಷಕರು ಕಾತುರದಿಂದ ಕಾದಿದ್ದಾರೆ.
ಸಾರಥಿ ಚಿತ್ರದ ಟೈಟಲ್ ಸಾಂಗ್ ಇಷ್ಟ ಪಡುವ ದೀಪಾ, ದರ್ಶನ್ ಅವರಿಂದ ಸಾಕಷ್ಟು ಅಭಿನಯದ ಪಾಠವನ್ನು ಕಲಿತೆ ಎನ್ನುತ್ತಾರೆ. ಹುಡುಗ್ರು ಚಿತ್ರ ಆದಮೇಲೆ ಪುನೀತ್ ರಾಜ್ ಕುಮಾರ್ ಹಾಗೂ ಯೋಗರಾಜ್ ಭಟ್ ಕಾಂಬಿಯೇಷನ್ ನಲ್ಲಿ ಬರುತ್ತಿರುವ ಪರಮಾತ್ಮ ಚಿತ್ರದಲ್ಲೂ ದೀಪಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಕ್ಷಿತಾ ಹಾಗೂ ರಮ್ಯ ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಈ ರೀತಿ ಡಬಲ್ ಆಫರ್ ಕನ್ನಡದ ನಾಯಕಿಗೆ ಸಿಕ್ಕಿದ್ದು ಕಮ್ಮಿ ಎನ್ನಬಹುದು.
ಸುದೀಪ್ ಜೊತೆ ನಟಿಸುವ ಅವಕಾಶವೂ ಸಿಕ್ಕಿತ್ತು ಅಲ್ಲದೆ, ಸಾರಥಿ ಚಿತ್ರದಲ್ಲಿ ಬ್ಯುಸಿಯಾಗಿದ್ದರಿಂದ ಚಾನ್ಸ್ ಮಿಸ್ ಆಯ್ತು. ಸುದೀಪ್ ಜೊತೆ ನಟಿಸುವ ಆಸೆಯಿದೆ. ಪರಮಾತ್ಮದಲ್ಲಿ ಐಂದ್ರಿತಾ ರೇ ಹಾಗೂ ರಮ್ಯಾ ಬಾರ್ನೆ ಜೊತೆ ನಟಿಸುವ ಸಾಧ್ಯತೆಯಿದ್ದರೂ ನನ್ನ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ಯೋಗರಾಜ ಭಟ್ ಸರ್ ಹೇಳಿದ್ದಾರೆ. ನಾನು ಇನ್ನೂ ಕಲಿಕೆ ದಿನಗಳನ್ನು ಎದುರಿಸುತ್ತಿದ್ದೇನೆ. ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತೇನೆ ಎನ್ನುತ್ತಾರೆ ದೀಪಾ.