ಸದಾಶಿವ ಬ್ರಹ್ಮಾವರರಿಗೆ ವರದರಾಜು ಪ್ರಶಸ್ತಿ

ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ರವೀಂದ್ರ ಕಲಾಕ್ಷೇತ್ರದ ನಯನ ಸಂಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 26ರ ಸಂಜೆ ನಡೆಯಲಿದೆ. ರಂಗಭೂಮಿ ಮತ್ತು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಕಲಾವಿದರಿಗೆ ಕಳೆದ ಮೂರು ವರ್ಷಗಳಿಂದ ಎಸ್ ಪಿ ವರದರಾಜು ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಎಸ್ ಪಿ ವರದರಾಜು ಆತ್ಮೀಯ ಬಳಗದಲ್ಲಿ ಡಾ.ಬರಗೂರು ರಾಮಚಂದ್ರಪ್ಪ, ಡಾ.ಜಯಮಾಲಾ, ಬಿ ಎನ್ ಸುಬ್ರಹ್ಮಣ್ಯ, ದೊಡ್ಡಹುಲ್ಲೂರು ರುಕ್ಕೋಜಿ, ಎಚ್ ಕೆ ಗೋವಿಂದಪ್ಪ, ಎ ಎನ್ ಪ್ರಹ್ಲಾದರಾವ್, ಗುಡಿಹಳ್ಳಿ ನಾಗರಾಜ್, ಡಾ.ವೇಮಗಲ್ ನಾರಾಯಣಸ್ವಾಮಿ, ವತ್ಸಲಾ ಮೋಹನ್ ಮತ್ತು ದೇವ ನಾಗೇಶ್ ಇದ್ದಾರೆ.
ಎಸ್ ಪಿ ವರದರಾಜು ಪ್ರಶಸ್ತಿ ಇದುವರೆಗೂ ಲಕ್ಷ್ಮಿದೇವಿ, ಪರಮಶಿವಯ್ಯ, ರತ್ನಾಕರ್, ನಾಗರತ್ನಮ್ಮ, ಶನಿಮಹದೇವಪ್ಪ ಮತ್ತು ಸರೋಜಮ್ಮ ದುತ್ತರಗಿ ಅವರಿಗೆ ನೀಡಿ ಗೌರವಿಸಲಾಗಿದೆ. ಈ ಬಾರಿಯ ಪ್ರಶಸ್ತಿ ಸದಾಶಿವ ಬ್ರಹ್ಮಾವರ ಹಾಗೂ ಬಿ ಪಿ ರಾಜಮ್ಮ ಅವರನ್ನು ವರಿಸಿರುವುದು ವಿಶೇಷ.
More from Filmibeat
ಕನ್ನಡ ಸಿನಿಮಾ ಜಯಮಾಲಾ dr jayamala ಎಸ್ ಪಿ ವರದರಾಜು ಸದಾಶಿವ ಬ್ರಹ್ಮಾವರ ಬಿ ಪಿ ರಾಜಮ್ಮ ಚಿರಂಜೀವಿ ಸಿಂಗ್ spvaradaraju award sadashiva brahmavar b p rajamma chiranjeevi singh


Click it and Unblock the Notifications











