Don't Miss!
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾನವೀಯತೆ ಮೆರೆದ ಕಲಾಸಾಮ್ರಾಟ್ ನಾರಾಯಣ್
ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ಎಸ್.ನಾರಾಯಣ್ ಅಂಧ ಮಕ್ಕಳ ಬಗ್ಗೆ ಕಾಳಜಿ ತೋರಿಸಿದ್ದಾರೆ. ತಮ್ಮ ಪುತ್ರ ಪಂಕಜ್ ಅಭಿನಯದ 'ರಣ' ಚಿತ್ರದ ಹಾಡುಗಳನ್ನು ಜೆ.ಪಿ.ನಗರದಲ್ಲಿರುವ ರಮಣ ಮಹರ್ಷಿ ಅಂಧ ಮಕ್ಕಳ ಶಾಲೆಯಲ್ಲಿ ಬಿಡುಗಡೆ ಮಾಡಿದ ಅವರು ಅಂಧ ಮಕ್ಕಳು ಒಳಗಣ್ಣಿನಿಂದ ದೇವರನ್ನು ನೋಡುತ್ತಾರೆ.
ನಮ್ಮ ಅನುಕಂಪಕ್ಕಿಂತ ಹೆಚ್ಚಾಗಿ ಪ್ರೋತ್ಸಾಹದ ಅವಶ್ಯಕತೆ ಈ ಮಕ್ಕಳಿಗೆ ಬೇಕಾಗಿದೆ. ಸಿನಿಮಾದಲ್ಲಿ ಕೆಲವೊಂದು ದೃಶ್ಯಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತೇವೆ. ಒಂದು ದಿನ ಶೂಟಿಂಗ್ ನಿಂತರೆ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ನಾನು ಒಂದು ದಿನದ ಚಿತ್ರೀಕರಣ ವೆಚ್ಚವನ್ನು ಶಾಲೆಗಾಗಿ ನೀಡುತ್ತೇನೆ ಎಂದರು.
ಪಂಕಜ್ ಹುಟ್ಟುಹಬ್ಬವನ್ನು ಮುಂದೆ ನಾವು ಅಂಧ ಮಕ್ಕಳ ಶಾಲೆಯಲ್ಲಿಯೇ ಆಚರಿಸುತ್ತೇವೆ. ಶಾಲೆಗಾಗಿ ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ಪಂಚತಾರಾ ಹೋಟೆಲ್ಗಳಲ್ಲಿ ಆಡಿಯೊ ಬಿಡುಗಡೆ ಮಾಡುವುದಕ್ಕಿಂತ ಇದೊಂದು ಅರ್ಥಪೂರ್ಣ ಸಮಾರಂಭ ಎಂದರು. ಇಂತಹ ಮಾನವೀಯತೆಯ ಗುಣ ಉಳಿದ ಕಲಾವಿದರಿಗೂ ಬರಲಿ ಮತ್ತು ಅಂಧ ಮಕ್ಕಳಿಗೆ ಸರಿಯಾದ ಪ್ರೋತ್ಸಾಹ ಸಿಗುವಂತಾಗಲಿ. (ಒನ್ಇಂಡಿಯಾ ಕನ್ನಡ)