ದರ್ಶನ್ ಪ್ರಕರಣದ ಬಗ್ಗೆ ಕವಿತಾ ಲಂಕೇಶ್ ಏನಂತಾರೆ?
ಸದ್ಯಕ್ಕೆ ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ. ಅಕ್ಟೋಬರ್ 4ರವರೆಗೂ ಅವರಿಗೆ ಸೆಷನ್ಸ್ ನ್ಯಾಯಾಲಯ ದರ್ಶನ್ಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.ದರ್ಶನ್ ಪರಿಸ್ಥಿತಿ ಮುಂದೇನಾಗುತ್ತದೆ ಎಂಬ ಕುತೂಹಲ ಕನ್ನಡ ಚಿತ್ರರಂಗದಲ್ಲಿ ನೆಲೆಗೊಂಡಿದೆ.
ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕಿ ಕವಿತಾ ಲಂಕೇಶ್, ಒಂದು ವೇಳೆ ದರ್ಶನ್ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಅವರಿಗೆ ಶಿಕ್ಷೆಯಾಗಲಿ. ಶ್ರೀಸಾಮನ್ಯನಿಗೆ ಕೊಟ್ಟಷ್ಟೇ ಶಿಕ್ಷೆ ಅವರಿಗೂ ಕೊಡಲಿ ಎಂದಿದ್ದಾರೆ.
ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಬಾಲಿವುಡ್ ನಟ ಸಂಜಯ್ ದತ್ ಕೂಡ ಜೈಲು ಶಿಕ್ಷೆಗೆ ಗುರಿಯಾದರು. ತಪ್ಪು ಮಾಡಿದ್ದರೆ ದರ್ಶನ್ಗೂ ಶಿಕ್ಷೆಯಾಗಲಿ ಎಂದಿರುವ ಅವರು ದರ್ಶನ್ ಪತ್ನಿ ವಿಜಯಲಕ್ಷ್ಮಿ ಪರಿಸ್ಥಿತಿಯ ಬಗ್ಗೆಯೂ ಕನಿಕರ ವ್ಯಕ್ತಪಡಿಸಿದ್ದಾರೆ. (ದಟ್ಸ್ಕನ್ನಡ ಸಿನಿವಾರ್ತೆ)
More from Filmibeat
English summary
Kannada actor Darshan controversy has become the big issue in Sandalwood. Sharing her thoughts about it, noted director Kavita Lankesh reportedly mentioned that law must take its own course and if Darshan has committed a crime, he should be punished like a common man.


Click it and Unblock the Notifications











