twitter
    For Quick Alerts
    ALLOW NOTIFICATIONS  
    For Daily Alerts

    ಐಟಿ ದಾಳಿ ಹಿನ್ನೆಲೆ; ಬೆಂಗಳೂರಿಗೆ ಮರಳಿದ ಅನುಷ್ಕಾ ಶೆಟ್ಟಿ

    By Rajendra
    |

    ಆದಾಯ ತೆರಿಗೆ ದಾಳಿ ಬಳಿಕ ಬೆಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ತುಂಬಾ ಬೇಜಾರಾಗಿದ್ದು ತವರಿಗೆ ಮರಳಲು ಮನಸ್ಸು ಮಾಡಿದ್ದಾರೆ. ಬೆಂಗಳೂರು ಹಾಗೂ ಹೈದರಾಬಾದಿನ ಅನುಷ್ಕಾ ಅವರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದರು. ಇದರಿಂದಬೇಜಾರಾಗಿರುವ ಆಕೆ ಭಾರವಾದ ಮನಸ್ಸನ್ನು ಕೊಂಚ ಹಗುರ ಮಾಡಿಕೊಳ್ಳಲು ಬೆಂಗಳೂರಿಗೆ ಮರಳಿದ್ದಾರೆ.

    ಐಟಿ ದಾಳಿ ವೇಳೆ ಆದಾಯ ತೆರಿಗೆ ಅಧಿಕಾರಿಗಳು ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಮೂಲಗಳ ಪ್ರಕಾರ, ಚಿನ್ನಾಭರಣ ಸೇರಿದಂತೆ ದಾಖಲೆ ಇಲ್ಲದ ಹಣವನ್ನು ವಶಕ್ಕೆ ತೆಗೆದುಕೊಂಡಿದ್ದರು. ಇತ್ತೀಚೆಗೆ ಆಕೆ ವಿಶಾಖಪಟ್ಟಣಂನಲ್ಲಿ ಪ್ಲಾಟ್ ಒಂದನ್ನು ಖರೀದಿಸಿದ್ದರು. ಅದರ ಬಗ್ಗೆಯೂ ಆದಾಯ ತೆರಿಗೆ ಅಧಿಕಾರಿಗಳು ನಾನಾ ಪ್ರಶ್ನೆ ಕೇಳಿ ಅನುಷ್ಕಾ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.

    ಇಷ್ಟೆಲ್ಲಾ ತರಲೆ ತಾಪತ್ರಯಗಳಿಂದ ಆಕೆಯ ಮನಸ್ಸು ಈಗ ತುಂಬಾ ಭಾರವಾಗಿದೆಯಂತೆ. ಕೆಲ ದಿನಗಳ ಕಾಲ ಬೆಂಗಳೂರಿನ ತಂಪು ಹವೆಯಲ್ಲಿ ವಿಹರಿಸಿದರೆ ಎಲ್ಲಾ ಸರಿಹೋಗುತ್ತದೆ. ಮನಸ್ಸು ಹೂವಿನಷ್ಟು ಹಗುರವಾಗುತ್ತದೆ ಎಂದು ಆಕೆ ಹೈದರಾಬಾದ್ ಬೆಂಗಳೂರು ವಿಮಾನ ಹತ್ತಿ ಆಗಮಿಸಿದ್ದಾರೆ ಎನ್ನುತ್ತವೆ ಮೂಲಗಳು.

    English summary
    After Income Tax raid actress Anushka Shetty very much upset. It is said that after such a bad experience she decided to stay in her hometown Bangalore for a few days.Also she allegedly that she was targeted for no reason. IT sleuths found some gold jewellery and unaccounted wealth and currency at her residence in Hyderabad.
    Thursday, March 31, 2011, 18:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X