Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನೀಶ್-ದೀಪಾ ಸನ್ನಿಧಿ ಜೋಡಿಯ 'ಮಾಂಜಾ' ಶುರು
ಮಾಂಜಾ ಕೋಡೊಕೆ ರೆಡಿಯಾದರು ಅನೀಶ್ ಮತ್ತು ದೀಪಾ ಸನ್ನಿಧಿ. ಇವರಿಬ್ಬರಿಗೂ ವಿಶ್ ಮಾಡಿದರು ರಾಕಿಂಗ್ ಸ್ಟಾರ್ ಯಶ್.
'ನಮ್ ಏರಿಯಾದಲ್ ಒಂದಿನಾ' ಹಾಗೂ 'ಪೊಲೀಸ್ ಕ್ವಾರ್ಟಸ್' ಸಿನಿಮಾಗಳನ್ನ ಮಾಡಿ ಸುಮ್ಮನಿದ್ದ ನಟ ಅನೀಶ್ ತೇಜೇಶ್ವರ್, ಇತ್ತೀಚೆಗೆ 'ಅಕಿರ' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಮೊದಲೆರಡು ಚಿತ್ರಗಳಿಗಿಂತ 'ಅಕಿರ' ತಕ್ಕ ಮಟ್ಟಿಗೆ ಅನೀಶ್ ಗೆ ಯಶಸ್ಸು ತಂದುಕೊಟ್ಟಿತ್ತು.
'ಅಕಿರ'ದಲ್ಲಿ ಇಬ್ಬರು ನಾಯಕಿಯರು ಜೊತೆ ಡ್ಯುಯೆಟ್ ಹಾಡಿದ್ದ ಅನಿಶ್, ಈಗ ಸ್ಯಾಂಡಲ್ ವುಡ್ ನ ಲಕ್ಕಿ ನಾಯಕಿಯೊಂದಿಗೆ 'ಮಾಂಜಾ' ಕೊಡೊಕೆ ಸಿದ್ದವಾಗಿದ್ದಾರೆ.[ಯಶ್ ಬದ್ಲು ಅನೀಶ್ 'ಮಾಂಜಾ' ಕೊಡ್ತಾರಂತೆ.!]
ಹೌದು, ಅನೀಶ್ ಅಭಿನಯಿಸಲಿರುವ ಹೊಸ ಚಿತ್ರ 'ಮಾಂಜಾ' ಇತ್ತೀಚಿಗೆ ಮುಹೂರ್ತ ಮಾಡಿಕೊಂಡಿದೆ. 'ಮಾಂಜಾ' ಚಿತ್ರದಲ್ಲಿ ಅನೀಶ್ ಗೆ ನಾಯಕಿ ದೀಪಾ ಸನ್ನಿಧಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಮೂಹೂರ್ತಕ್ಕೆ ಆಗಮಿಸಿದ್ದ ರಾಕಿಂಗ್ ಸ್ಟಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದರು.
ಈ ಮೊದಲು 'ಮಾಂಜಾ' ಚಿತ್ರವನ್ನ ಯಶ್ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಯಶ್ ಬದಲು ಈಗ ಅನೀಶ್ 'ಮಾಂಜಾ'ಗೆ ನಾಯಕನಾಗಿದ್ದಾರೆ.'ಮಾಂಜಾ' ಚಿತ್ರವನ್ನ ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಯಶ್ ಅಭಿನಯದ 'ಲಕ್ಕಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸೂರಿ, ನೀನಾಸಂ ಸತೀಶ್ ಅಭಿನಯಿಸಿದ್ದ 'ಕ್ವಾಟ್ಲೆ ಸತೀಶ್' ಚಿತ್ರಕ್ಕೆ ಬಂಡವಾಳ ಹಾಕಿದ್ದರು.[ಬರೋಬ್ಬರಿ 46 ಕಥೆ ಕೇಳಿ 'ಓಕೆ' ಎಂದ್ರಾ 'ಈ' ನಟ ಮಹಾಶಯ]
ಇನ್ನು ಅಕಿರ' ಚಿತ್ರ ನಿರ್ಮಿಸಿದ್ದ ಚೇತನ್ ಕುಮಾರ್ ಈ ಚಿತ್ರಕ್ಕೂ ಹಣ ಹಾಕುತ್ತಿದ್ದಾರೆ. ಜೊತೆಗೆ ಎಸ್.ಎಸ್. ರೆಡ್ಡಿ ಮತ್ತು ಶ್ರೀಕಾಂತ್ ಪ್ರಸನ್ನ ಸಹ ನಿರ್ಮಾಣದಲ್ಲಿ ಚೇತನ್ ಕುಮಾರ್ ಜೊತೆಗೆ ಕೈ ಜೋಡಿಸುತ್ತಿದ್ದಾರೆ. ಈ ಚಿತ್ರ ಎಸ್2 ಎಂಟರ್ಟೈನ್ ಮೆಂಟ್ ಬ್ಯಾನರ್ನಡಿ ನಿರ್ಮಾಣವಾಗುತ್ತಿದೆ.
ಇದು ಕಮರ್ಷಿಯಲ್ ಮನರಂಜನಾ ಚಿತ್ರವಾಗಿದ್ದು, ಚಿಕ್ಕಣ್ಣ, ಸಾಧುಕೋಕಿಲಾ, ರವಿಶಂಕರ್, ರಂಗಾಯಣ ರಘು ಮತ್ತು ಕಡ್ಡಿಪುಡಿ ಚಂದ್ರು ಸಿನಿಮಾದ ತಾರಾಗಣದಲ್ಲಿದ್ದಾರಂತೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ರಸೂಲ್ ಎಲ್ಲೂರ್ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಬಹುತೇಕ ಬೆಂಗಳೂರು ಹಾಗು ಮೈಸೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ.