Don't Miss!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- News ‘ಮೋದಿಯನ್ನು ಬಾಯಿಗೆ ಬಂದ ಹಾಗೆ ಬೈದ ದೇವೇಗೌಡ್ರು ಈಗ ಅಪ್ಪಿಕೊಳ್ಳುವುದು ಎಂದರೆ ಏನರ್ಥ?’
- Lifestyle ಹೌಸ್ವೈಫ್ ಆಗಿರುವ ಈ ಮಹಿಳೆ ದಿನದಲ್ಲಿ 2 ಗಂಟೆ ಕೆಲಸ ಮಾಡಿ ಲಕ್ಷ ಗಳಿಸುತ್ತಿದ್ದಾರಂತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Automobiles ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಲಸದ ಆಮೀಷ ಒಡ್ಡಿ 5 ಲಕ್ಷಕ್ಕೆ ನಾಮ ಹಾಕಿದ ನಟ
ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಣಿಕಂಠನ್ ಎಂಬುವವರಿಂದ ರು.5 ಲಕ್ಷ ತೆಗೆದುಕೊಂಡಿದ್ದ. ಬಳಿಕ ಕೆಲಸವೂ ಇಲ್ಲದೆ ದುಡ್ಡು ಕೊಡದೆ ಕಣ್ಣುತಪ್ಪಿಸಿಕೊಂಡು ಅಲೆದಾಡುತ್ತಿದ್ದ. ಈತ ತನಗೆ ನಂಬಿಸಿ ಮೋಸ ಮಾಡಿರುವ ಸಂಗತಿ ಗೊತ್ತಾಗುತ್ತಿದ್ದಂತೆ ಮಣಿಕಂಠನ್ ಪೊಲೀಸರಿಗೆ ದೂರು ನೀಡಿದ್ದಾನೆ.
ಈತ ತೆಲುಗು ಹಾಗೂ ತಮಿಳು ಚಿತ್ರಗಳಲ್ಲೂ ಅಭಿನಯಿಸುತ್ತಿದ್ದಾನೆ. ಈತ ಟೋಪಿ ಹಾಕಿರುವುದು ತನ್ನ ಖಾಸಾ ದೋಸ್ತ್ ಗೆ ಎಂಬುದು ವಿಶೇಷ. "ನಾನು ಮತ್ತು ಪವನ್ ಗೆಳೆಯರು. ಕೆಲಸ ಕೊಡಿಸುತ್ತೇನೆ ರು.5 ಲಕ್ಷ ಕೊಡು ಎಂದು ತೆಗೆದುಕೊಂಡಿದ್ದ. ಕಾದು ಕಾದು ಸಾಕಾಯಿತೆ ಹೊರತು ಈತ ಕೆಲಸ ಕೊಡಿಸುವ ಮಾತು ದೂರವಾಗಿಯೇ ಉಳಿಯಿತು" ಎಂದಿದ್ದಾನೆ ಮಣಿಕಂಠನ್.
ಹಣ ವಾಪಸ್ ಕೊಡು ಎಂದರೆ ಅದಕ್ಕೂ ಈತ ಕ್ಯಾರೆ ಅನ್ನಲಿಲ್ಲ. ತೀರಾ ಬಲವಂತ ಮಾಡಿದರೆ ಕೊಲೆ ಬೆದರಿಕೆ ಹಾಕುತ್ತಿದ್ದ. ಈತ ಇನ್ನು ಹಣ ಕೊಡುವುದಿಲ್ಲ ಎಂದು ಕನ್ಫರ್ಮ್ ಆಯಿತು. ಹಾಗಾಗಿ ಚೆನ್ನೈ ಸೆಂಟ್ರಲ್ ಕ್ರೈಮ್ ಬ್ರಾಂಚ್ ಪೊಲೀಸ್ ಅಸಿಸ್ಟೆಂಟ್ ಕಮೀಷನರ್ ಅವರಿಗೆ ದೂರು ನೀಡಿದೆ ಎಂದಿದ್ದಾನೆ ಮಣಿಕಂಠನ್.
ಆತನ ದೂರನ್ನು ಸ್ವೀಕರಿಸಿದ ಪೊಲೀಸರು ನಟ ಪವನ್ ಕುಮಾರ್ ನನ್ನು ಬಂಧಿಸಿದ್ದಾರೆ. ಆತನ ವಿಚಾರಣೆ ನಡೆಯುತ್ತಿದ್ದು ಇನ್ನಷ್ಟೇ ಸತ್ಯಾಸತ್ಯತೆಗಳು ಹೊರಬೀಳಬೇಕಾಗಿವೆ. ಅಲ್ಲಿಯವರೆಗೂ ಪೊಲೀಸರ ಅತಿಥಿಸತ್ಕಾರ ಪವನ್ ಕುಮಾರ್ ಗೆ ನಡೆಯಲಿದೆ.